ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆ

| Published : Jun 14 2025, 03:06 AM IST / Updated: Jun 14 2025, 03:07 AM IST

ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆ, ಪೊಲೀಸ್ ಠಾಣೆ ನಿರ್ಮಾಣ ಮಾಡಿದಾಗ ಶಾಂತಿ ನೆಲೆಸುವುದಿಲ್ಲ ಇದರಿಂದ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ದೇವಾಲಯದಿಂದ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದು ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಯಾವ ವ್ಯಕ್ತಿ ನಿಷ್ಕಲ್ಮ ಶವಾಗಿ ದೇವರ ಧ್ಯಾನವನ್ನು ಮಾಡುತ್ತಾರೆ ಅಂತವರಿಗೆ ಅಂತರಂಗದಲ್ಲಿ ದೇವರನ್ನು ಕಾಣಬಹುದು, ಸಾಕಷ್ಟು ಮಂದಿ ರಾಘವೇಂದ್ರ ಸ್ವಾಮಿಯನ್ನು ಕಂಡಿದ್ದಾರೆ. ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಆಸ್ಪತ್ರೆ, ಪೊಲೀಸ್ ಠಾಣೆ ನಿರ್ಮಾಣ ಮಾಡಿದಾಗ ಶಾಂತಿ ನೆಲೆಸುವುದಿಲ್ಲ ಇದರಿಂದ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ದೇವಾಲಯದಿಂದ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದು ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಕಸಬಾ ಹೋಬಳಿ ಗುಳಸಿಂದ ಗ್ರಾಮದಲ್ಲಿ ಶ್ರೀರಾಘವೇಂದ್ರ ಸ್ವಾಮಿಯವರ ಪ್ರತೀಕ ಬೃಂದಾವನಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ರೋಗಿಗಳ ಸಂಖ್ಯೆ ಹೆಚ್ಚು ಇರುವ ಜಾಗದಲ್ಲಿ ಹಣ ಸಂಪಾದನೆಗಾಗಿ ಆಸ್ಪತ್ರೆ ನಿರ್ಮಾಣ ಮಾಡುತ್ತಾರೆ, ಆಸ್ಪತ್ರೆ ನಿರ್ಮಾಣದ ಬದಲಾಗಿ ಜನತೆ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಮಾರ್ಗದರ್ಶನ ನೀಡುವ ಕೇಂದ್ರಗಳನ್ನು ತೆರೆಯಬೇಕು ಎಂದರು.

ಪೊಲೀಸ್ ಠಾಣೆಗಳು ಇರುವ ಜಾಗದಲ್ಲಿ ಅಪಾರಾಧಿಗಳ ಸಂಖ್ಯೆ ಹೆಚ್ಚುತ್ತದೆ ಹೊರತು ಯುವ ಜನತೆ ಅಪರಾದ ಮಾಡದಂತೆ ಮಾರ್ಗದರ್ಶವನ್ನು ನೀಡುವ ಕೆಲಸ ಪೊಲೀಸರು ಮಾಡುವುದಿಲ್ಲ, ಅದೇ ದೇವಾಲಯಗಳು ಸಮಾಜದ ಶಾಂತಿ ಹಾಗೂ ಮನುಕುಲದ ನೆಮ್ಮದಿಗಾಗಿ ಇವೆ, ಯಾವ ವ್ಯಕ್ತಿ ನಿತ್ಯ ದೇವಾಲಯಕ್ಕೆ ಬರುವುದನ್ನು ರೂಢಿಸಿಕೊಳ್ಳುತ್ತಾರೆ. ಆತನಿಗೆ ಆರೋಗ್ಯ ವೃದ್ಧಿಯಾಗುವುದಲ್ಲದೆ, ಸಂಸ್ಕಾರವನ್ನು ರೂಢಿಸುತ್ತದೆ ಎಂದರು.

ರಾಯರ ಸೇವೆಯಿಂದ ಮನುಷ್ಯ ಜನ್ಮದಲ್ಲಿ ಮುಕ್ತಿ ಹೊಂದಬಹುದು, ದೇವರು ಎಲ್ಲಿದ್ದಾನೆ ಎನ್ನುವ ಬದಲಾಗಿ ದೇವರನ್ನು ಕಾಣುವ ತವಕ ನಮ್ಮಲ್ಲಿ ಬರಬೇಕು. ಯಾವ ವ್ಯಕ್ತಿ ನಿಷ್ಕಲ್ಮ ಶವಾಗಿ ದೇವರ ಧ್ಯಾನವನ್ನು ಮಾಡುತ್ತಾರೆ ಅಂತವರಿಗೆ ಅಂತರಂಗದಲ್ಲಿ ದೇವರನ್ನು ಕಾಣಬಹುದು, ಸಾಕಷ್ಟು ಮಂದಿ ರಾಘವೇಂದ್ರ ಸ್ವಾಮಿಯನ್ನು ಕಂಡಿದ್ದಾರೆ. ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆ ಎಂದರು.

ಔಷಧಿಯಿಂದ ಬದುಕುವಂತೆ ಸನ್ನಿವೇಷವನ್ನು ತಂದುಕೊಳ್ಳುವ ಬದಲಾಗಿ ನಿತ್ಯ ಆಹಾರ ಸೇವೆ ಹಾಗೂ ನಡವಳಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ ರೋಗದಿಂದ ದೂರು ಉಳಿದು ಔಷಧಿ ಸೇವನೆ ಮಾಡದೆ ಜೀವನ ನಡೆಸಬಹುದಾಗಿದೆ, ವಾರದಲ್ಲಿ ಒಂದು ದಿವಸ ಉಪವಾಸ ಮಾಡುವುದು, ಕ್ರಮಬದ್ಧವಾಗಿ ಸಮಯಕ್ಕೆ ಸರಿಯಾಗಿ ಮಿತವಾಗಿ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಮಕ್ಕಳನ್ನು ಶಿಕ್ಷಣ ವಂತರನ್ನಾಗಿ ಮಾಡುತ್ತಿದ್ದೇವೆ ಹೊರತು ಅವರನ್ನು ಜ್ಞಾನವಂತರನ್ನಾಗಿ ಮಾಡುತ್ತಿಲ್ಲ, ಗುರುಹಿರಿಯರಿಗೆ ಗೌರವ ಕೊಡುವುದನ್ನು ರೂಢಿಸುತ್ತಿಲ್ಲ, ಸನಾತನ ಧರ್ಮದ ಬಗ್ಗೆ ತಿಳಿಸುತ್ತಿಲ್ಲ, ಈ ಮಣ್ಣಿನ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುತ್ತಿಲ್ಲ ಹಾಗಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ ಯಾವ ವ್ಯಕ್ತಿ ಧರ್ಮಕ್ಕೆ ಬೆಲೆ ಕೊಡುತ್ತಾನೆ ಆತನಿಂದ ಸಮಾಜ ಸೇವೆಯನ್ನು ನಿರೀಕ್ಷಿಸಬಹುದು, ಇದನ್ನು ಮನಗಂಡು ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರ ಕಲಿಸಲು ಮುಂದಾಗಿ ಎಂದರು.

ವಿದೇಶಗಳಲ್ಲಿಯೂ ರಾಘವೇಂದ್ರಸ್ವಾಮಿಯ ಮಂದಿರಗಳು ನಿರ್ಮಾಣ ಆಗುತ್ತಿವೆ, ಭಾರತೀಯರನ್ನು ನೋಡಿ ವಿದೇಶಿಗಳು ಭಕ್ತಿಗೆ ಮಾರು ಹೋಗುತ್ತಿದ್ದಾರೆ. ಆದರೆ ಶಿಕ್ಷಣ ಕಲಿತ ಭಾರತೀಯರು ಹಾಗೂ ಶ್ರೀಮಂತರ ಮಕ್ಕಳು ಈ ನೆಲದ ಸಂಸ್ಕಾರವನ್ನು ಬಿಟ್ಟು ವಿದೇಶಿ ಸಂಸ್ಕೃತಿ ಕಲಿಯುತ್ತಿದ್ದಾರೆ. ಭಾರತೀಯರಿಗೆ ಇರುವ ಶಕ್ತಿಯನ್ನು ಮೊದಲು ಅರಿತು, ವಿದೇಶ ಸಂಸ್ಕೃತಿ ಅಳವಡಿಸಿಕೊಳ್ಳುವುದ ನಿಲ್ಲಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸಿ.ಕೆ.ಕುಸುಮಾರಾಣಿ ಮಾತನಾಡಿ, ಆಧುನಿಕ ಹಾಗೂ ವಿಜ್ಞಾನದ ಯುಗದಲ್ಲಿ ಧರ್ಮ ಉಳಿದಿರುವುದು ಭಾರತದಲ್ಲಿ ಮಾತ್ರ, ದೇಶದ ಪ್ರತಿ ಗ್ರಾಮಗಳಲ್ಲಿ ಮಂದಿರಗಳು ಇವೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಹಾಗಾಗಿ ಜನತೆ ನೆಮ್ಮದಿಯಿಂದ ಬದುಕು ಕಟ್ಟಿಕೊಂಡಿದ್ದಾರೆ, ಭಾರತೀಯರು ಶಾಂತಿ ಪ್ರಿಯರು ವಿಶ್ವವೇ ಶಾಂತಿಯಿಂದ ಇರಬೇಕು ಎನ್ನುವುದನ್ನು ಬಯಸುತ್ತಾರೆ ಎಂದರು.

ಉಪಗ್ರಹ ಉಡಾವಣೆ ವೇಳೆಯಲ್ಲಿಯೂ ವಿಜ್ಞಾನಿಗಳು ಪೂಜೆ ಮಾಡುತ್ತಾರೆ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರೂ ಕೂಡ ಚಿಕಿತ್ಸೆ ಕೊಟ್ಟ ಮೇಲೆ ದೇವರಿದ್ದಾನೆ ಎಂದು ರೋಗಿಗಳಿಗೆ ದೈರ್ಯ ತುಂಬುವುದ ನೋಡಿದರೆ ದೇವರ ಮೇಲಿನ ನಂಬಿಕೆ ಶಕ್ತಿ ಎಂತಹದ್ದು ಎನ್ನುವುದು ತಿಳಿಯುತ್ತದೆ, ದೇಶದ ಪ್ರತಿ ಮನೆಯಲ್ಲಿ ಅವರವರ ಧರ್ಮಕ್ಕೆ ಅನುಗುಣವಾಗಿ ಪೂಜೆ ಮಾಡಲಾಗುತ್ತದೆ ಎಂದರು.

ತಾಲೂಕು ಅರ್ಚಕ ಸಂಘದ ಅಧ್ಯಕ್ಷ ಶ್ರೀಧರ್‌ಮೂರ್ತಿ, ರಾಜ್ಯಪ್ರಶಸ್ತಿ ವಿಜೇತ ಲೋಕೇಶ್ ದಾಸ್, ಬೆಂಗಳೂರಿನ ಕಾಮಧೇನು ಕ್ಷೇತ್ರದ ಗುರುಶೇಷ, ಮಂಜುಳಮ್ಮ, ಸುಲೋಚನಾ, ಚರಣ್‌ರಾಜ್, ಮಮತಾ, ಪ್ರಕಾಶ್, ಗುಳಸಿಂದ ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.