ಪತ್ರಕರ್ತರ ಕ್ರೀಡಾಕೂಟದ ಕೆಬಿಜಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಪಾಧ್ಯಕ್ಷರ ತಂಡ ದ್ವಿತೀಯ ಸ್ಥಾನ

| Published : Jul 29 2025, 01:00 AM IST

ಪತ್ರಕರ್ತರ ಕ್ರೀಡಾಕೂಟದ ಕೆಬಿಜಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಪಾಧ್ಯಕ್ಷರ ತಂಡ ದ್ವಿತೀಯ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ಸದಸ್ಯರಾದ ಯತಿಂದ್ರ ಸಿದ್ದರಾಮಯ್ಯ, ಶಾಸಕರಾದ ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಿ. ರವಿಶಂಕರ್ ಬಹುಮಾನ ವಿತರಿಸಿದರು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಜಿಲ್ಲಾ ಪತ್ರಕರ್ತರ ಸಂಘ ವತಿಯಿಂದ ಓವಲ್ ಮೈದಾನದಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದ ಕೆಬಿಜಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ ನೇತೃತ್ವದ ಉಪಾಧ್ಯಕ್ಷರ ತಂಡ ದ್ವಿತೀಯ ಸ್ಥಾನ ಪಡೆಯಿತು. ಇದರ ಜೊತೆಗೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡದ ನಾಯಕ ಹಾಗೂ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ ಉತ್ತಮ ಬೌಲರ್, ಪವರ್ ಟಿವಿ ವರದಿಗಾರ ಪ್ರೇಮ್ ಉತ್ತಮ ಬ್ಯಾಟ್ಸ್‌ ಮನ್‌ ಹಾಗೂ ನನ್ನೂರು ಮೈಸೂರು ಪತ್ರಿಕೆ ಪಿರಿಯಾಪಟ್ಟಣ ತಾಲೂಕು ವರದಿಗಾರ ಬೆಕ್ಕರೆ ಸತೀಶ್ ಆರಾಧ್ಯ ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದಿದ್ದು ವಿಶೇಷವಾಗಿತ್ತು, ವಿಧಾನ ಪರಿಷತ್ ಸದಸ್ಯರಾದ ಯತಿಂದ್ರ ಸಿದ್ದರಾಮಯ್ಯ, ಶಾಸಕರಾದ ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಡಿ. ರವಿಶಂಕರ್ ಬಹುಮಾನ ವಿತರಿಸಿದರು,

ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ್, ಖಜಾಂಚಿ ಸುರೇಶ್, ಬಹುಮಾನಗಳ ಪ್ರಾಯೋಜಕತ್ವ ವಹಿಸಿದ್ದ ಸಂಘದ ನಿರ್ದೇಶಕರಾದ ರಾಜು ಕಾರ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಪತ್ರಕರ್ತರ ಕುಟುಂಬ ಸದಸ್ಯರು ಇದ್ದರು.