ಶರಣಸತ್ಯದ ಶಕ್ತಿ ಸಾಹಿತ್ಯದಲ್ಲಿ ಕಾಣಬಹುದು: ಬಸವಾನಂದರು

| Published : Jan 15 2025, 12:46 AM IST

ಶರಣಸತ್ಯದ ಶಕ್ತಿ ಸಾಹಿತ್ಯದಲ್ಲಿ ಕಾಣಬಹುದು: ಬಸವಾನಂದರು
Share this Article
  • FB
  • TW
  • Linkdin
  • Email

ಸಾರಾಂಶ

ಬಸವಸೇವಾ ಪ್ರತಿಷ್ಠಾನ ವತಿಯಿಂದ ಶರಣ ಉದ್ಯಾನದಲ್ಲಿ ಶರಣ ಸಂಗಮ ಹಾಗೂ ವಚನ ಹೃದಯ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್12 ನೇ ಶತಮಾನಕ್ಕಿಂತ ಪೂರ್ವ ಇಂಥ ವಿಚಾರ ಸಾಹಿತ್ಯದಲ್ಲಿರಲಿಲ್ಲ. ಶರಣರ ಸತ್ಯದ ಶಕ್ತಿ ಇದರಲ್ಲಿ ಕಾಣಬಹುದಾಗಿದೆ ಎಂದು ಮನಗುಂಡಿಯ ಬಸವಾನಂದರು ನುಡಿದರು.ಬಸವಸೇವಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಶರಣ ಉದ್ಯಾನದಲ್ಲಿ ಶರಣ ಸಂಗಮ ಹಾಗೂ ವಚನ ಹೃದಯ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗ್ರಂಥ ಕರ್ತರಾದ ಬಸವಾನಂದ ಸ್ವಾಮಿಗಳು ಅನುಭಾವ ನೀಡಿ ವಚನಾಂಕಿತಗಳ ಸುದೀರ್ಘ ಚಿಂತನ ಮಂಥನ ಇಲ್ಲಿ ಅಳವಡಿಸಿದೆ. ಶರಣರ ಅಂಕಿತ ನಾಮ ಗಳು ಸ್ಥಾವರ ಮೂಲದವಲ್ಲ. ಜಂಗಮ ಭಾವದ ಸ್ವೋಪಜ್ಞ ಕುರುಹುಗಳು ಎಂಬುದು ಎತ್ತಿ ಹಿಡಿಯಲಾಗಿದೆ. ಶರಣರ ಅಂಕಿತನಾಮಗಳು ವಿಶ್ವ ಸಾಹಿತ್ಯದಲ್ಲಿ ಪ್ರಥಮ ಶರಣರ ವಚನಾಂಕಿತ ಕಲ್ಪನೆ ವೈಚಾರಿಕ ಹಿನ್ನೆಲೆಯಲ್ಲಿ ಅಳವಡಿಸಿದೆ. ಆದ್ಯರು, ವೇದ್ಯರು, ಪುರಾತನರು ಮತ್ತು ಪ್ರಮಥರು ಎಂಬ ಪದಗಳಿಗೆ ನಿಖರವಾದ ಅರ್ಥ ನೀಡಿದೆ. ಪುಸ್ತಕದಲ್ಲಿ ಬದಲಾದ ಜೀವನ ಚರಿತ್ರೆ ಮತ್ತು ಶರಣ ತತ್ವ ವನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶ ಕಲ್ಪಿಸುತ್ತದೆ. ಚಿಂತಕರಿಗೆ ಪ್ರಗತಿಪರ ವಿಚಾರ ಉಳ್ಳವರಿಗೆ ವಚನಾಧ್ಯಯಗಳಿಗೆ ಇದು ಮಾರ್ಗದರ್ಶನ ವಾಗಿದೆ ಎಂದರು.ಗಾಂಧಿ ಗಂಜ ಬ್ಯಾಂಕ್ ನ ಉಪಾಧ್ಯಕ್ಷರಾದ ಸುನೀಲ ಗೂನಳ್ಳಿ ಉದ್ಘಾಟಿಸಿದರು. ಪುಸ್ತಕ ಬಿಡುಗಡೆಗೊಳಿಸಿದ ರಾಷ್ಟ್ರೀಯ ಬಸವ ದಳದ ಬಳ್ಳಾರಿ ಅಧ್ಯಕ್ಷೆ ಶಾರದಾ ತಾಯಿ ಬಳ್ಳಾರಿ ಮಾತನಾಡಿ, ಪೂಜ್ಯರು ಎರಡು ಕಣ್ಣುಗಳು ಕಳೆದುಕೊಂಡು ಸಂಕಷ್ಟದ ಜೀವನದ ಮಧ್ಯೆ ಇಡೀ ರಾಜ್ಯವೇ ತನ್ನತ್ತ ನೋಡುವ ಹಾಗೆ ಕಾರ್ಯ ಮಾಡುತ್ತಿದ್ದಾರೆ. ಅವರು ಬರೆದ ಆರೋಗ್ಯ ಅಮೃತ ಗ್ರಂಥ ಸುಮಾರು ಹದಿನಾಲ್ಕು ಸಲ ಮರು ಮುದ್ರಣಗೊಂಡಿದೆ. ವಚನ ಹೃದಯ ಗ್ರಂಥ ಹೊಸ ವಿವೇಚನೆ ಹಾಗೂ ಮೌಲಿಕ ಗ್ರಂಥವಾಗಿದೆ ಎಂದರು.

ವಿಶ್ವನಾಥ ಕಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ. ನಮ್ಮಲ್ಲಿ ದಿನೇದಿನೇ ಬಸವ ಅಭಿಮಾನ ಕಡಿಮೆಯಾಗುತ್ತಿದೆ. ನಾವೆಲ್ಲರೂ ನಿರಂತರವಾಗಿ ಶರಣ ಸಂಗಮ, ಬಸವ ಜ್ಯೋತಿ, ಪ್ರವಚನ, ವಿಜಯೋತ್ಸವ ಅಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಬಸವ ಪ್ರಜ್ಞೆ ಮೂಡಲು ಸಾಧ್ಯ ಎಂದರು.ಸಾನಿಧ್ಯ ವಹಿಸಿದ ಡಾ ಗಂಗಾಂಬಿಕಾ ತಾಯಿ ಮಾತನಾಡಿ, ನಮ್ಮಲ್ಲಿ ವಚನ ಸಾಹಿತ್ಯ ಅಗಾಧ ಶಕ್ತಿ ಅಡಗಿದೆ. ಅದನ್ನು ಅನುಷ್ಠಾನ ಹಾಗೂ ಆಚರಣೆ ಮಾಡ ಬೇಕಾಗಿದೆ ಫೆಬ್ರವರಿ ತಿಂಗಳ 10, 11, 12 ರಂದು ಕಲ್ಯಾಣ ಕರ್ನಾಟಕದ ವಿಜಯೋತ್ಸವ ಕಾರ್ಯಕ್ರಮ ಅತ್ಯಂತ ವೈಭವ ರೀತಿಯಿಂದ ಆಚರಿಸಲು ಎಲ್ಲರ ಸಹಕಾರ ಕೋರಿದರು. ಸುನೀಲ ಗೂನಳ್ಳಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ರಾಜ್ಯ ಪರಿಷತ್ ಸದಸ್ಯರಾದ ರಾಜಕುಮಾರ ಮಾಳಗೆ, ಖಜಾಂಚಿ ದೇವಪ್ಪ ಹಾಗು ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತುಗಾವೆ ಹಾಗೂ ಪತ್ರಕರ್ತ ಶೆಶಿಕಾಂತ ಶೆಂಬೆಳ್ಳಿ ಅವರನ್ನು ಸನ್ಮಾನಿಸಲಾಯಿತು.ಶಿವಶಂಕರ ಟೋಕರೆ ಇದ್ದರು. ಗಂಗಪ್ಪ ಸಾವಲೆ ಸ್ವಾಗತಿಸಿದರು ಲಕ್ಷ್ಮಿಬಾಯಿ ಬಿರಾದಾರ ನಿರೂಪಿಸಿದರೆ ವಿಜಯಲಕ್ಷ್ಮಿ ಸಾವಲೆ ವಂದಿಸಿದರು.