ಸಾರಾಂಶ
ಬದುಕು ಕಟ್ಟುವ ಮೌಲ್ಯಗಳುಳ್ಳ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ.
ಭಟ್ಕಳ: ಬದುಕು ಕಟ್ಟುವ ಮೌಲ್ಯಗಳುಳ್ಳ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ ಎಂದು ಶಿರಾಲಿಯ ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಹೆಗಡೆ ಹೇಳಿದರು.
ಅವರು ಜಾಲಿಯ ವೆಂಕಟೇಶ್ವರ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೪-೨೫ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಸಮಾರೋಪ ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.ಇಂದು ವಿದ್ಯಾರ್ಥಿಗಳು ಗುರುಗಳಿಂದ ಮೌಲ್ಯಯುತವಾದ ವಿದ್ಯೆಯನ್ನು ಸಂಪಾದಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ಮಾತನಾಡಿ, ಕಾಲೇಜಿನ ಸೌಲಭ್ಯಗಳು ಎಲ್ಲ ಬಡ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ಸಚಿವ ಮಂಕಾಳ ವೈದ್ಯರು ಕಾಲೇಜಿನ ಕಟ್ಟಡಕ್ಕೆ ಒಂದೂವರೆ ಕೋಟಿ ಅನುದಾನವನ್ನು ತಂದಿದ್ದು ಅವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾಲೇಜನ್ನಾಗಿ ರೂಪಿಸಬಹುದೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಮೇಶ ಗೊಂಡ, ಸೋಮಯ್ಯ ಗೊಂಡ, ಮಂಜಪ್ಪ ನಾಯ್ಕ ಜಾಲಿ, ರಮೇಶ್ ನಾಯ್ಕ ಹುರುಳಿಸಾಲ್ ಮಾತನಾಡಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರೂಪಾ ನಾಯ್ಕ ಸ್ವಾಗತ ಗೀತೆ ಹಾಡಿದರು, ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಸುರೇಶ ಮೆಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜೇತ ನಾಯ್ಕ ನಿರೂಪಿಸಿದರು ರೋಹಿತ್ ನಾಯ್ಕ ವಂದಿಸಿದರು.
ಭಟ್ಕಳದ ಜಾಲಿಯ ಸರ್ಕಾರಿ ಪದವಿ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿರುವುದು.