ನಾಳೆ ವಜ್ರೇಶ್ವರಿಯ ಮುತ್ತು ಕನ್ನಡಿಗರ ಸ್ವತ್ತು ಗಾಯನ

| Published : May 30 2025, 12:12 AM IST

ಸಾರಾಂಶ

ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರಿಗೆ ಡಾ. ರಾಜ್ ಕಲಾ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂಚೆ ಇಲಾಖೆಯ ಪೋಸ್ಟ್ ವುಮೆನ್, ಕ್ರೀಡಾಪಟು ಎಂ. ವೀಣಾ ಅವರನ್ನು ಅಭಿನಂದಿಸಲಾಗುವುದು.

ಮೈಸೂರು: ಡಾ. ರಾಜ್‌ ಕುಮಾರ್ ಕಲಾ ಸೇವಾ ಟ್ರಸ್ಟ್ ವತಿಯಿಂದ ಡಾ. ರಾಜ್‌ಕುಮಾರ್ ಅವರ 97ನೇ ಜಯಂತಿ, ಪಾರ್ವತಮ್ಮ ರಾಜ್‌ ಕುಮಾರ್ ಅವರ 8ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮೇ 31ರ ಸಂಜೆ 5ಕ್ಕೆ ನಗರದ ಕಲಾಮಂದಿರದಲ್ಲಿ ವಜ್ರೇಶ್ವರಿಯ ಮುತ್ತು ಕನ್ನಡಿಗರ ಸ್ವತ್ತು ಶೀರ್ಷಿಕೆಯಲ್ಲಿ ಕನ್ನಡ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಬಿ.ಎಸ್. ಜಯರಾಮರಾಜು ತಿಳಿಸಿದರು. ಇದು ಡಾ. ರಾಜ್‌ ಕುಮಾರ್ ಅವರು ಹಾಡಿರುವ ಕನ್ನಡ ಚಿತ್ರಗೀತೆಗಳ ಲೈವ್ ಕಾರ್ಯಕ್ರಮವಾಗಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ. ಸುರೇಶ್, ರಾಮ್‌ ದಾಸ್, ಸುರೇಂದ್ರನ್, ಚಂದ್ರಶೇಖರ್, ಅಶ್ವಿನಿ, ತೇಜಸ್ವಿನಿ, ಶ್ರುತಿ, ಅನಿತಾ ಅವರು ಒಟ್ಟು 28 ಗೀತೆಗಳನ್ನು ಹಾಡಲಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದೇ ವೇಳೆ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರಿಗೆ ಡಾ. ರಾಜ್ ಕಲಾ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂಚೆ ಇಲಾಖೆಯ ಪೋಸ್ಟ್ ವುಮೆನ್, ಕ್ರೀಡಾಪಟು ಎಂ. ವೀಣಾ ಅವರನ್ನು ಅಭಿನಂದಿಸಲಾಗುವುದು ಎಂದರು. ಈ ಕಾರ್ಯಕ್ರಮವನ್ನು ಶಾಸಕ ಕೆ. ಹರೀಶ್ ಗೌಡ ಉದ್ಘಾಟಿಸುವರು. ಡಾ. ಭಾಷ್ಯಂಸ್ವಾಮಿ ಸಾನ್ನಿಧ್ಯ ವಹಿಸುವರು. ಆರ್. ರಘು ಅಧ್ಯಕ್ಷತೆ ವಹಿಸುವರು. ಪೂರ್ಣಿಮಾ ರಾಮಕುಮಾರ್, ಪವನ್ ಜೋಶಿ, ಕೆ. ರಘುರಾಂ ವಾಜಪೇಯಿ, ನಾಗರಾಜ ವಿ. ಬೈರಿ, ಅಂಶಿ ಪ್ರಸನ್ನಕುಮಾರ್, ಮಂಜುನಾಥ್, ಡಿ.ಟಿ. ಪ್ರಕಾಶ್, ಎನ್.ಎಸ್. ರಾಘವೇಂದ್ರ, ಸುವರ್ಣಮ್ಮ ಅತಿಥಿಯಾಗುವರು ಎಂದು ಅವರು ತಿಳಿಸಿದರು. ಗಾಯಕರಾದ ಸುರೇಶ್, ಚಂದ್ರಶೇಖರ್, ಲತಾ ಬಾಲಕೃಷ್ಣ ಇದ್ದರು.