ಕನ್ನಡಪ್ರಭ ವಾರ್ತೆ ಅಮೀನಗಡ

ಪಟ್ಟಣದಲ್ಲಿ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಗೆ ಭಾರಿ ಗಾತ್ರದ ಮರಗಳು ಧರೆಗುರುಳಿವೆ. ವಿಜಯಾ ಕರದಂಟು ಫ್ಯಾಕ್ಟರಿಯಲ್ಲಿ ಛಾವಣಿ ಶೀಟ್‌ ಹಾರಿ ಗಾಜಿನ ಕಿಟಕಿಗಳು ಮುರಿದುಬಿದ್ದ ಪರಿಣಾಮ ಕಾರ್ಯನಿರ್ವಹಿಸುತ್ತಿದ್ದ 7 ಜನ ಕಾರ್ಮಿಕರಿಗೆ ಗಾಯಗಳಾಗಿದ್ದು ಕೆಲವರನ್ನು ಅಮೀನಗಡ ಸರಕಾರಿ ಆಸ್ಪತ್ರೆ ಹಾಗೂ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.ಪಟ್ಟಣದ ಬುದ್ದಿಮಾಂದ್ಯಶಾಲೆಯ ಎದುರಿನ ಬೃಹತ್ ಆಲದಮರ ಉರುಳಿಬಿದ್ದಿದ್ದು, ಅದರ ಕೆಳಗೆ ನಿಲ್ಲಿಸಿದ್ದ ಶಿಕ್ಷಕ ಹೊಸಮನಿಯವರ ಹೊಂಡ ಬೈಕ್ ಅಪ್ಪಚ್ಚಿಯಾಗಿದೆ.