ಚಾಮರಾಜನಗರ: ಉದಯ ಕಾಮಿಡಿ ಟಿವಿಯಲ್ಲಿ ಪ್ರತಿದಿನ ಸಾಯಂಕಾಲ 6 ಗಂಟೆಗೆ ಪ್ರಸಾರವಾಗುವ ಪುಟಾಣಿ ಏಜೆಂಟ್ 1,2,3 ಕಾರ್ಯಕ್ರಮಕ್ಕೆ ನಗರದ ಸೆಂಟ್ ಫ್ರಾನ್ಸಿಸ್ ಐಸಿಐಸಿ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿರುವ ದೀಕ್ಷಾ ಜೈಶಂಕರ್ ಆಯ್ಕೆಯಾಗಿದ್ದಾರೆ. ಈ ಪುಟಾಣಿಯ ಕಾರ್ಯಕ್ರಮ ಡಿ.16 ಸೋಮವಾರ ಸಂಜೆ 6 ಗಂಟೆಗೆ ಉದಯ ಕಾಮಿಡಿ ಟಿವಿಯಲ್ಲಿ ಪ್ರಸಾರವಾಗಲಿದೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ, ಪುಟಾಣಿ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಕುಟುಂಬದವರು ಕೋರಿದ್ದಾರೆ. ನಗರದ ಡಾ .ಬಿ .ಆರ್ ಅಂಬೇಡ್ಕರ್ ಬಡಾವಣೆಯಲ್ಲಿ ವಾಸವಾಗಿರುವ ಕೆ.ಚೈತ್ರ ಜೈಶಂಕರ್ ದಂಪತಿ ಪುತ್ರಿ. ಅಭಿನಂದನೆ: ಉದಯ ಕಾಮಿಡಿ ಪುಟಾಣಿ 1,2,3 ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪುಟಾಣಿ ದೀಕ್ಷಾ ಜೈಶಂಕರ್ ಅವರನ್ನು ಪವನ್ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಸಂಪತ್ ಕುಮಾರ್, ಕಾರ್ಯದರ್ಶಿ ಪಿ.ವೀಣಾ ಹಾಗೂ ಕುಟುಂಬದವರು ಅಭಿನಂದಿಸಿದ್ದಾರೆ.
ಉದಯ ಕಾಮಿಡಿ ಪುಟಾಣಿ 123 ಕಾರ್ಯಕ್ರಮಕ್ಕೆ ಪುಟಾಣಿ ದೀಕ್ಷಾ ಜೈಶಂಕರ್ ಆಯ್ಕೆ
ಉದಯ ಕಾಮಿಡಿ ಪುಟಾಣಿ 1,2,3 ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಪುಟಾಣಿ ದೀಕ್ಷಾ ಜೈಶಂಕರ್ ಅವರನ್ನು ಪವನ್ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಸಂಪತ್ ಕುಮಾರ್, ಕಾರ್ಯದರ್ಶಿ ಪಿ.ವೀಣಾ ಹಾಗೂ ಕುಟುಂಬದವರು ಅಭಿನಂದಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.