ಸೌಲಭ್ಯ ಬಳಸಿ ಸಮಾಜದಲ್ಲಿ ಸದೃಢರಾಗಿ: ಫೀರಸಾಬ್‌

| Published : Jun 27 2025, 12:48 AM IST

ಸೌಲಭ್ಯ ಬಳಸಿ ಸಮಾಜದಲ್ಲಿ ಸದೃಢರಾಗಿ: ಫೀರಸಾಬ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ 2011ರಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ವತಿಯಿಂದ ಪರಿಶಿಷ್ಟ ವರ್ಗಗಳ ಜನರ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ಆಯೋಜಿಸಿದೆ

ರಾಣಿಬೆನ್ನೂರು: ಪರಿಶಿಷ್ಟ ವರ್ಗದ ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸಕಲ ಸವಲತ್ತುಗಳನ್ನು ಪಡೆದುಕೊಂಡು ಸಮಾಜದಲ್ಲಿ ಸದೃಢರಾಗಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗದ ನೋಡಲ್ ಅಧಿಕಾರಿ ಫೀರಸಾಬ್ ತಿಳಿಸಿದರು.ತಾಲೂಕಿನ ಯಕಲಾಸಪುರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಧರ್ತಿ ಆಬಾ ಜನಭಾಗಿದಾರ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ 2011ರಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ವತಿಯಿಂದ ಪರಿಶಿಷ್ಟ ವರ್ಗಗಳ ಜನರ ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ಆಯೋಜಿಸಿದೆ. ಇದು ಈಗಾಗಲೇ ದೇಶಾದ್ಯಂತ ವಿಸ್ತರಣೆಯಾಗಿದ್ದು, ನಮ್ಮ ರಾಜ್ಯದಲ್ಲಿಯೂ ಜಾರಿಯಾಗಿದೆ. ಜಿಲ್ಲೆಯಲ್ಲಿ ರಾಣಿಬೆನ್ನೂರು ತಾಲೂಕಿನ ಯಕಲಾಸಪುರ ಗ್ರಾಮ ಆಯ್ಕೆ ಮಾಡಿದ್ದು, ಜನರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಬುಡಕಟ್ಟು ಜನರಿಗೆ ಬೇಕಾದ ಆರೋಗ್ಯ, ಕಂದಾಯ, ಶಿಕ್ಷಣ, ಕೌಶಲ್ಯಾಭಿವೃದ್ದಿ, ಮೀನುಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸೇರಿದಂತೆ ಸಂಬಂಧಿಸಿದ ಇಲಾಖೆಯ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈಗಾಗಲೇ ಗ್ರಾಮದಲ್ಲಿ ಅಧಿಕಾರಿಗಳು ಸರ್ವೆ ಮಾಡುವ ಮೂಲಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ. ನಿಮ್ಮ ಮನೆ ಬಾಗಿಲಿಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಸೌಲಭ್ಯಗಳನ್ನು ಪಡೆಯಬೇಕು ಎಂದರು.ಗ್ರಾಪಂ ಅಧ್ಯಕ್ಷೆ ಮಧು ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಅಶ್ವಿನಿ ಬಣಕಾರ, ಮಂಜಮ್ಮ ಬುಳ್ಳಮ್ಮನವರ, ಸಮಾಜ ಕಲ್ಯಾಣ ಇಲಾಖೆಯ ಎಡಿ ಮಹಾಂತೇಶ ಸಿ.ಬಿ., ಎಸಿಡಿಪಿಒ ವೈ.ಟಿ. ಪೂಜಾರ, ಕಂದಾಯ ಅಧಿಕಾರಿ, ವಿ.ಎಸ್. ಮಳಿಮಠ, ಪ್ರಭಾರ ಪಿಡಿಒ ಸುಜಾತ, ಗ್ರಾಮ ಲೆಕ್ಕಾಧಿಕಾರಿ ರುದ್ರೇಶ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.ಬುಡಕಟ್ಟು ಜನ ಸರ್ಕಾರದ ಸೌಲಭ್ಯ ಪಡೆಯಲಿ

ಹಿರೇಕೆರೂರು: ಬುಡಕಟ್ಟು ಜನರು ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಪಡೆಯಲು ಈ ಅಭಿಯಾನ ಸಹಕಾರಿಯಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ತಾಲೂಕಿನ ಅಲದಕಟ್ಟಿ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ತಿ ಆಬಾ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ತಿ ಆಬಾ ಕಾರ್ಯಕ್ರಮದ ಉದ್ದೇಶ ಪರಿಶಿಷ್ಟ ಪಂಗಡದ ಸವಲತ್ತುಗಳನ್ನು ಪಡೆಯಲು ಸಂಬಂಧಿಸಿದ 17 ಇಲಾಖೆಗಳಿಂದ ದಾಖಲೆಗಳನ್ನು ಪಡೆಯುವುದಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ನ್ಯೂಮೋನಿಯಾ ಕುರಿತು ತಪಾಸಣೆ ಮಾಡಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲವೆಂದು ತಿಳಿಸಿದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾವೇರಿ ಕಚೇರಿಯ ತನಿಖಾ ಸಹಾಯಕರಾದ ಪಿ.ಎಚ್. ನದಾಫ್ ಮಾತನಾಡಿ, ಪರಿಶಿಷ್ಟ ವರ್ಗದ ಜನಾಂಗದವರ ಏಳಿಗೆಗಾಗಿ ಕೇಂದ್ರ ಸರ್ಕಾರ ಧರ್ತಿ ಆಬಾ ಯೋಜನೆ ಜಾರಿಗೆ ತಂದಿದೆ ಎಂದರು.ತಹಸೀಲ್ದಾರ್‌ ಪ್ರಭಾಕರಗೌಡ ಮಾತನಾಡಿದರು. ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮೆಹಬೂಬ್ ಸಾಬ್ ನದಾಫ್, ತಾಪಂ ಇಒ ರವಿ ಎನ್., ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಬುರುಡಿಕಟ್ಟಿ, ಪ್ರಭು, ವೀರಭದ್ರಗೌಡಗೌಡರ, ಪಿಡಿಒ ಸೊರಟೂರ್, ಸಹಾಯಕ ಕೃಷಿ ನಿರ್ದೇಶಕ ಜಿತೇಂದ್ರ ಗೌಡಪ್ಪಳವರ್, ತಾಲೂಕು ಆರೋಗ್ಯ ಅಧಿಕಾರಿ ಜೆಡ್‌.ಆರ್. ಮಕಾಂದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಡಿ ಜಯಶ್ರೀ ಪಾಟೀಲ್, ವೀರಭದ್ರಗೌಡರ್ ಮಾದೇವ್‌ಗೌಡ ಪಾಟೀಲ್, ಕಾಳಿಂಗಪ್ಪ ಬೂದಿಹಾಳ, ವೀರನಗೌಡ ಪಾಟೀಲ್, ಮಹಾಂತೇಶ್‌ ಕೆಂಗನವರ, ನಾಗಪ್ಪ ಹೆಗ್ಗೇರಿ ಇತರರು ಇದ್ದರು.