ಸರಸ್ವತಿ ಪುತ್ರ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ

| Published : Jun 01 2024, 12:45 AM IST

ಸರಸ್ವತಿ ಪುತ್ರ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಲಕ್ಷ್ಮೀಪುತ್ರ ಕಣಕಿಳಿದಿದ್ದು, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸರಸ್ವತಿ ಪುತ್ರ ಕಣಕಿಳಿದಿದ್ದಾರೆ. ಶಿಕ್ಷಕರು ಸರಸ್ವತಿ ಪುತ್ರ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮತ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್‌ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಲಕ್ಷ್ಮೀಪುತ್ರ ಕಣಕಿಳಿದಿದ್ದು, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸರಸ್ವತಿ ಪುತ್ರ ಕಣಕಿಳಿದಿದ್ದಾರೆ. ಶಿಕ್ಷಕರು ಸರಸ್ವತಿ ಪುತ್ರ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮತ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್‌ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ಪ್ರತಿನಿಧಿಸಬೇಕು ಎಂದು ಹೇಳಿದ್ದ ಜೆಡಿಎಸ್‌ ಪಕ್ಷದ ರಾಜ್ಯಧ್ಯಕ್ಷರು ಇಂದು ಬಿಜೆಪಿ ಮತ್ತು ಜೆಡಿಸ್‌ ಮೈತ್ರಿ ಅಭ್ಯರ್ಥಿಯಾಗಿ ಉದ್ಯಮಿಯನ್ನು ಕಣಕಿಳಿಸಿದ್ದಾರೆ ಏಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರು 4 ಬಾರಿ ಆಯ್ಕೆಯಾಗಿದ್ದು, 24 ವರ್ಷಗಳ ಕಾಲ ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಅವರ ಅವಧಿಯಲ್ಲಿ ಬ್ಯಾಕ್‌ ಲಾಗ್‌ ಹುದ್ದೆಯನ್ನು ತುಂಬಿದ್ದಾರೆ. 1242 ಉಪನ್ಯಾಸಕರು, 330 ಪ್ರಾಂಶುಪಾಲರನ್ನು ನೇಮಕಮಾಡಲು ಪಟ್ಟಿ ಸಿದ್ದವಾಗಿದ್ದು, ನೀತಿ ಸಂಹಿತೆಯಿಂದ ವಿಳಂಬವಾಗಿದ್ದು, ಚುನಾವಣೆ ಫಲಿತಾಂಶ ನಂತರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3ರಂದು ನಡೆಯಲಿದ್ದು, ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಬಿಜೆಪಿ ಪಕ್ಷದ ವೈಫಲ್ಯ ಗಮನಿಸಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಿ ಮತನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ಕಾಡ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಆರ್‌ ಮಹದೇವ್‌, ಮಹಮ್ಮದ್‌ ಅಸ್ಗರ್‌ ಮಹದೇವಶೆಟ್ಟಿ, ಮಧುಸೂದನ್‌, ಶೇಖರಪ್ಪ, ನಾಗೇಂದ್ರ ಇದ್ದರು.