ಮರದದಿಮ್ಮಿ ಇಲ್ಲದೇ ಹಳ್ಳದಾಟುವ ಯೋಗವಿಲ್ಲ!

| Published : Jun 08 2024, 12:37 AM IST

ಮರದದಿಮ್ಮಿ ಇಲ್ಲದೇ ಹಳ್ಳದಾಟುವ ಯೋಗವಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಗಾಲ ಪ್ರಾರಂಭವಾದರೂ ಇಲ್ಲಿನ ಬೆಳಕೋಡು-ಕರಡಿಗ ಗ್ರಾಮ ಸಂಪರ್ಕವೂ ಮೃತ್ಯುವಿನ ಜೊತೆಗೆ ಸರಸವಾಡಿದಂತಾಗಿದ್ದು. ಪ್ರತಿನಿತ್ಯ ಈ ಸಂಪರ್ಕದ ಸಾರವೇ ಮೂಲಕವೇ ಶಾಲೆ -ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು, ಮಹಿಳೆಯರ, ವೃದ್ಧರು ಹೀಗೆ ಕೃಷಿಕರು ಮತ್ತು ಸಾರ್ವಜನಿಕರು ಕಾಲಸಂಕದ ಮೇಲೆ ಸರ್ಕಸ್ ಮಾಡಿಕೊಂಡು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಕೋಡು-ಕರಡಿಗ ಗ್ರಾಮದ ಸಂಪರ್ಕದ ಶರ್ಮಿನಾವತಿ ಹಳ್ಳಕ್ಕೆ 2022-23 ನೇ ಸಾಲಿನಲ್ಲಿ 15 ಲಕ್ಷ ರು. ಅಂದಾಜು ಮೊತ್ತದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುಸಂಕ ಕಾಮಗಾರಿ ನಿರ್ಮಿಸಲಾದರೂ ತಜ್ಞರ ಅವೈಜ್ಞಾನಿಕ ಯೋಜನೆಯಿಂದಾಗಿ ಸಾರವೇ (ಮರದದಿಮ್ಮಿ) ಇಲ್ಲದೆ ಕಾಲಸಂಕ ಮೇಲೆ ಓಡಾಡುವ ಯೋಗವಿಲ್ಲದ ಸ್ಥಿತಿ ಎದುರಾಗಿದೆ.

ಮಳೆಗಾಲ ಪ್ರಾರಂಭವಾದರೂ ಇಲ್ಲಿನ ಬೆಳಕೋಡು-ಕರಡಿಗ ಗ್ರಾಮ ಸಂಪರ್ಕವೂ ಮೃತ್ಯುವಿನ ಜೊತೆಗೆ ಸರಸವಾಡಿದಂತಾಗಿದ್ದು. ಪ್ರತಿನಿತ್ಯ ಈ ಸಂಪರ್ಕದ ಸಾರವೇ ಮೂಲಕವೇ ಶಾಲೆ -ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು, ಮಹಿಳೆಯರ, ವೃದ್ಧರು ಹೀಗೆ ಕೃಷಿಕರು ಮತ್ತು ಸಾರ್ವಜನಿಕರು ಕಾಲಸಂಕದ ಮೇಲೆ ಸರ್ಕಸ್ ಮಾಡಿಕೊಂಡು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿ ಬಳಸಿ ದೂರದ ಪ್ರಯಾಣದಿಂದ ರಿಪ್ಪನ್‌ಪೇಟೆ ಸೇರಬೇಕಿದೆ. ನೇರ ಸಂಪರ್ಕದ ದಾರಿ ನೀರಿನಿಂದ ಮುಳುಗಡೆಗೊಂಡು ಸಂಚಾರ ಅಸ್ತವ್ಯಸ್ತವಾಗುವುದರಿಂದ ಇಲ್ಲಿನ ಜನರು ಪೇಟೆ ಪಟ್ಟಣ ಸನಿಹ ಸಂಚಾರಕ್ಕಾಗಿ ಶರ್ಮಿನಾವತಿ ಹಳ್ಳದ ಎರಡು ಕಡೆಯ ದಂಡೆಗೆ ಮರದ ಉದ್ದದ ಮರದ ದಿಮ್ಮಿಗಳ ಅಡ್ಡಲಾಗಿ ಹಾಕಿ ಅದರ ಮೇಲೆ ಸರ್ಕಸ್ ಮಾಡಿಕೊಂಡು ಜೀವಭಯದಲ್ಲಿ ಕಾಲುಸಂಕ ನಿರ್ಮಿಸಿಕೊಂಡು ದಾಟುವಂತಾಗಿದೆ. ಆದರೆ, ಸಂಕ ದಾಟುವಾಗ ಸ್ವಲ್ಪ ಯಾಮಾರಿದರೂ ಯಮನ ಪಾದ ಎನ್ನುವ ಸನ್ನಿವೇಶವಿದೆ. ಆದರೂ ಅನಿವಾರ್ಯದ ಬಳಕೆ ಇದಾಗಿದ್ದು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಮ್ಮ ಗೋಳು ಕೇಳೋರಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಸುತ್ತಿ ಬಳಸಿ ಬರಬೇಕು:

ಈ ಗ್ರಾಮದ ಜನರು ಕೃಷಿ ಮತ್ತು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಸುಮಾರು ನೂರಕ್ಕೂ ಅಧಿಕ ಕುಟುಂಬಗಳಿರುವ ಇಲ್ಲಿನ ಜನ ಶಾಲೆ, ಆಸ್ಪತ್ರೆ, ಸಂತೆ ಇನ್ನಿತರ ದೈನಂದಿನ ಕಾರ್ಯಗಳಿಗೆ ರಿಪ್ಪನ್‍ಪೇಟೆಗೆ ಬರಬೇಕು. ಗ್ರಾಮಗಳ ಸಮೀಪದ ಮಾರ್ಗ ಅಸುರಕ್ಷಿತ ಕಾಲಸಂಕ ಬಳಸಬೇಕಿದೆ.

ಸರಕು ಸರಂಜಾಮು ವಾಹನದಲ್ಲಿ ಬದಲಿ ಮಾರ್ಗದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಕಣಬಂದೂರು ಮಾರ್ಗದ ಸುಮಾರು 10 ಕಿ.ಮೀ.ದೂರ ಸುತ್ತಾಡಿ ಸಾಗಬೇಕಿದೆ. ಸಣ್ಣ ಪುಟ್ಟ ಮಕ್ಕಳನ್ನು ಅಂಗನವಾಡಿಗಳಿಗೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಬಿಟ್ಟು ಬರುವುದೇ ಹರಸಾಹಸವಾಗಿದೆ.ಇನ್ನಾದರೂ ಗಮನಹರಿಸಿ

10 ವರ್ಷದಿಂದ ಚಿಕ್ಕಜೇನಿ ಬಳಿಯ ಮರದದಿಮ್ಮಿಯ ಕಾಲಸಂಕ ದಾಟುವಾಗ ಎರಡು ಮಕ್ಕಳು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದು ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಕ್ಷೇತ್ರ ಶಾಸಕರು, ಅಧಿಕಾರಿಗಳಾಗಲೀ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ಈ ಕಡೆ ಗಮನಹರಿಸಿ ಜಂಬಳ್ಳಿ ಯಡಗುಡ್ಡೆ ಸಂಪಳ್ಳಿ ಕಾರಗೋಡು ಬೇಲಕೋಡು ಕರಡಿಗ ಗ್ರಾಮಗಳ ರೈತರು, ನಾಗರಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಬೇಕು.

ರಾಮಪ್ಪ ಕರಡಿಗ, ಗ್ರಾಮಸ್ಥ