ಮಹಿಳೆಯರು ಪ್ರತಿ ಕ್ಷೇತ್ರದಲ್ಲಿಯೂ ಸಮರ್ಥರು: ಸಂಧ್ಯಾ

| Published : Mar 25 2024, 12:58 AM IST

ಸಾರಾಂಶ

ಮಹಿಳೆ ಅಬಲೆ ಅಲ್ಲ, ಸಬಲೆ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದಾಳೆ. ಆಕೆ ಯಾವುದೇ ಸೀಮಿತ ಕ್ಷೇತ್ರದಲ್ಲಿ ಅಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥಳು.

। ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ

। ಮಹಿಳೆಯರಿಗೆ ಆಟೋಟಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಿಳೆ ಅಬಲೆ ಅಲ್ಲ, ಸಬಲೆ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದಾಳೆ. ಆಕೆ ಯಾವುದೇ ಸೀಮಿತ ಕ್ಷೇತ್ರದಲ್ಲಿ ಅಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥಳು ಎಂದು ಹಿರಿಯ ನ್ಯಾಯವಾದಿ ಸಂಧ್ಯಾ ಮಾದಿನೂರು ಹೇಳಿದರು.

ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಸಭಾಂಗಣದಲ್ಲಿ ರೆಡ್ಡಿ ಮಹಿಳಾ ಸಂಘದವರು ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯನ್ನು ಅನಾದಿಕಾಲದಿಂದ ಕೇವಲ ಅಡುಗೆ ಮನೆಗೆ ಸೀಮಿತ ಮಾಡಲಾಗಿತ್ತು. ಆದರೆ, ಆಕೆ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಶಕ್ತಿ ತೋರಿಸಿದ್ದರಿಂದ ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶ ದೊರೆಯುತ್ತಿದ್ದು, ತನ್ನ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾಳೆ. ಆದರೂ ಇನ್ನು ಹೆಚ್ಚು ಹೆಚ್ಚು ಅವಕಾಶದ ಅವಶ್ಯಕತೆ ಇದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಮಾತನಾಡಿ, ಮಹಿಳೆಯರು ಈಗಾಗಲೇ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಇತರ ಮಹಿಳೆಯರು ಸಾಧನೆಯತ್ತ ಹೆಜ್ಜೆ ಹಾಕಬೇಕು ಎಂದರು.

ಡಾ. ಕಸ್ತೂರು ಕರಮುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಕಾಲದಲ್ಲಿ ಮಹಿಳೆಯರು ಸಬಲರಾಗಿದ್ದಾರೆ. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶದ ಬದುಕು ಇಂದಿಗೂ ಮಾದರಿಯಾಗಿದೆ ಎಂದರು.

ಸಮಾಜದ ಹಿರಿಯ ಮಹಿಳೆ ನಿರ್ಮಲಾ ಅವಾಜಿ, ಲಕ್ಷ್ಮೀ ಹಂಗನಕಟ್ಟಿ, ಸುರೇಖಾ ನಾಗರಳ್ಳಿ ಮಾತನಾಡಿದರು.

ಮಹಿಳೆಯರಿಗೆ ಕವಿತಾ ಅಳವಂಡಿ ವಿವಿಧ ಆಟಗನ್ನಾಡಿಸಿ, ರಂಜಿಸಿದರು.

ಶರಣಮ್ಮ ಪಾಟೀಲ್, ಶ್ವೇತಾ ಹೆಬ್ಬಾಳ, ಗಂಗಮ್ಮ ತೋಟದ, ಸರೋಜಾ ಮೇಟಿ, ಜಯಶ್ರೀ ಡಂಬ್ರಳ್ಳಿ, ಸುಜಾತಾ, ಗೀತಾ ಡಂಬ್ರಳ್ಳಿ ಮೊದಲಾದವರು ಇದ್ದರು.

ರತ್ನಾ ಕಾತರಕಿ ಪ್ರಾರ್ಥನಾ ಗೀತೆ ಹಾಡಿದರು. ಲಕ್ಷ್ಮೀ ಚಂದ್ರಶೇಖರ ವಂದಿಸಿದರು.