ಕಾವೇರಿ ಕಿಚ್ಚು:ಕರ್ನಾಟಕ ಸೇನಾಪಡೆಯಿಂದ ಸಿಡಿ ಕ್ಯಾಸೆಟ್  ಹಿಡಿದು ಪ್ರತಿಭಟನೆ
KannadaprabhaNewsNetwork | Published : Oct 12 2023, 12:00 AM IST / Updated: Oct 12 2023, 12:01 AM IST
ಕಾವೇರಿ ಕಿಚ್ಚು:ಕರ್ನಾಟಕ ಸೇನಾಪಡೆಯಿಂದ ಸಿಡಿ ಕ್ಯಾಸೆಟ್  ಹಿಡಿದು ಪ್ರತಿಭಟನೆ
ಸಾರಾಂಶ
ರಾಜ್ಯ ಸರ್ಕಾರವು  ತಮಿಳುನಾಡಿಗೆ ಹರಿಸುತ್ತಿರುವ  ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯು  ನಗರದಲ್ಲಿ  ಖಾಲಿ ಸಿಡಿ ಕ್ಯಾಸೆಟ್  ಹಿಡಿದು ಪ್ರತಿಭಟನೆ ನಡೆಸಿತು. 
 ರಾಜ್ಯ,ಕೇಂದ್ರ ಸರ್ಕಾರ,ನೀರು ನಿರ್ವಹಣಾ ಮಂಡಳಿಗಳೆಲ್ಲ ‘ಖಾಲಿ ಸಿಡಿ ಕ್ಯಾಸೆಟ್’  ಕನ್ನಡಪ್ರಭ ವಾರ್ತೆ ಚಾಮರಾಜನಗರ  ರಾಜ್ಯ ಸರ್ಕಾರವು  ತಮಿಳುನಾಡಿಗೆ ಹರಿಸುತ್ತಿರುವ  ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯು  ನಗರದಲ್ಲಿ  ಖಾಲಿ ಸಿಡಿ ಕ್ಯಾಸೆಟ್  ಹಿಡಿದು ಪ್ರತಿಭಟನೆ ನಡೆಸಿತು.  ನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿ ಕರ್ನಾಟಕ  ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ  ಪ್ರತಿಭಟನಾನಿರತರು ಖಾಲಿ ಸಿಡಿ ಕ್ಯಾಸೆಟ್  ಹಿಡಿದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ,  ಕಾವೇರಿ ನೀರು ನಿರ್ವಹಣಾ ಮಂಡಳಿ ‘ಖಾಲಿ ಸಿಡಿ ಕ್ಯಾಸೆಟ್’ ಎಂದು  ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ,  ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಇದೊಂದು ಖಾಲಿ ಕ್ಯಾಸೆಟ್  ಸರ್ಕಾರ, ತಮಿಳುನಾಡು ಸರ್ಕಾರ, ಕೇಂದ್ರ ಸರ್ಕಾರ,ಕಾವೇರಿ ನೀರು ನಿರ್ವಹಣಾ ಮಂಡಳಿಗಳೂ  ಖಾಲಿ ಕ್ಯಾಸೆಟ್ ಗಳಾಗಿವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು, ನೀರು ಹರಿಸಿ  ಮತ್ತೆ ಮತ್ತೆ  ರೈತರನ್ನು ಸಂಕಷ್ಟಕ್ಕೆ ದೂಡಬಾರದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ   ಗಾಯದ ಮೇಲೆ ಬರೆ ಎಳೆಯುತ್ತಿದ್ದು, ವಾಸ್ತವ ಸ್ಥಿತಿ ಅರಿತು ಸಂಕಷ್ಟ ಸೂತ್ರ ಕೊಡಲಿ ಎಂದು ಒತ್ತಾಯಿಸಿದರು. ಇದೇ ರೀತಿ ರಾಜ್ಯಕ್ಕೆ ಅನ್ಯಾಯ ಮುಂದುವರೆದರೆ  ತಮಿಳುನಾಡಿನ ಉತ್ಪನ್ನಗಳನ್ನು ಬಹಿಷ್ಕಾರ ಮಾಡುತ್ತೇವೆ, ತಮಿಳುನಾಡು ಗಡಿಯನ್ನು ಬಂದ್ ಮಾಡುತ್ತೇವೆ ಎಂದು ಶ್ರೀನಿವಾಸಗೌಡ ಎಚ್ಚರಿಸಿದರು.  ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ನಿಜಧ್ವನಿಗೋವಿಂದರಾಜು, ಸಿ.ಎಂ.ಕೃಷ್ಣಮೂರ್ತಿ, ಮಹೇಶ್ ಗೌಡ, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು ಇತರರು ಭಾಗವಹಿಸಿದ್ದರು.  -----------     11ಸಿಎಚ್ಎನ್18: ರಾಜ್ಯ ಸರ್ಕಾರವು  ತಮಿಳುನಾಡಿಗೆ ಹರಿಸುತ್ತಿರುವ  ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ   ಖಾಲಿ ಸಿಡಿ ಕ್ಯಾಸೆಟ್  ಹಿಡಿದು ಪ್ರತಿಭಟನೆ ನಡೆಸಲಾಯಿತು.