ಸಾರಾಂಶ
24ರವರೆಗೆ ಅರ್ಬನ್ ಹಾತ್ ನಲ್ಲಿ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ- ಹೊಸ ವರ್ಷದ ಸ್ವಾಗತಕ್ಕೆ ಇಲ್ಲಿದೆ ಹಲವು ವಸ್ತುಗಳು- ಕಲೆ, ಕಲಾವಿದರ ಸಮಾಗಮ; ಕಲಾ ರಸಿಕರಿಗೆ ಹರ್ಷ
- ಹೊಸ ವರ್ಷದ ಸ್ವಾಗತಕ್ಕೆ ಇಲ್ಲಿದೆ ಹಲವು ವಸ್ತುಗಳು
- ಕಲೆ, ಕಲಾವಿದರ ಸಮಾಗಮ; ಕಲಾ ರಸಿಕರಿಗೆ ಹರ್ಷಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ಹೊರ ವರ್ತುಲ ರಸ್ತೆಯಲ್ಲಿರುವ ಜೆಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಡಿ. 24 ರವರೆಗೆ ನಡೆಯಲಿದೆ.ಅಖಿಲ ಭಾರತ ಹಸ್ತಶಿಲ್ಪ ಕಲೆಗಳ, ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟದ ‘ಗಾಂಧಿ ಶಿಲ್ಪ ಬಜಾರ್’ನಲ್ಲಿ ಖರೀದಿಸಲೂ ಅವಕಾಶವಿದೆ.
ಮೈಸೂರಿಗೆ ಕಾವಿ ಕಲೆಯಲ್ಲಿ ಕಲಾಕೃತಿಗಳನ್ನು ಮೂಡಿಸುವ ಕಲಾವಿದರೂ ಬಂದಿದ್ದಾರೆ. ಅವರೂ ಈ ಮೇಳದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದ್ದಾರೆ.ಬಸ್ತಾರ್ ನ ಐರನ್ ಕ್ರಾಫ್ಟ್ ಕಲಾವಿದರು ಕಬ್ಬಿಣವನ್ನು ಬೇಕಾದಂತೆ ಬಾಗಿಸಿ ವಿವಿಧ ರೂಪಗಳನ್ನು ನೀಡಿದ್ದಾರೆ.
ಕೇರಳದ ಕೆ. ಸಲಿನ್ ಅವರು ಬಿದಿರಿಗೆ ಕಲಾಕೃತಿಗಳ ರೂಪ ನೀಡಿದ್ದು, ಮನ ಸೆಳೆಯುತ್ತಿವೆ. ತಮಿಳುನಾಡು ರಾಜ್ಯದ ಅಪ್ಪಟ ರೇಷ್ಮೆ ಸೀರೆಗಳನ್ನು ಕನಕ ರಾಜ್ ಅವರು ಮಳಿಗೆ ಸಂಖ್ಯೆ 10ರಲ್ಲಿ ಮಾರಾಟ ಮಾಡುತ್ತಿದ್ದು, ಅಸ್ಸಾಂ ರಾಜ್ಯದ ಮುಕೇಶ್ ಕುಮಾರ್ ಸಿಂಗ್ ಮತ್ತು ಶಿವಾನಿ ಸಿಂಗ್ ಅವರ ಮಳಿಗೆಯಲ್ಲಿ ಅಸ್ಸಾಂನ ಸಾಂಪ್ರದಾಯಿಕ ಸೀರೆಗಳು, ಡ್ರೆಸ್ ಮೆಟೀರಿಯಲ್ಗಳು ಮನಸೆಳೆಯುತ್ತವೆ.ಸಿಕ್ಕಿಂ ರಾಜ್ಯದ ಅರ್ಪನ್ ಇವರು ಅಲ್ಲಿನ ಕೈಮಗ್ಗದಿಂದ ತಯಾರಿಸಿರು ಸ್ವೆಟರ್ಗಳು, ಮಫ್ಲರ್ಗಳು, ಶಾಲ್ಗಳು ಚಳಿಗಾಲಕ್ಕೆ ಬೆಚ್ಚನೆಯ ಹಿತ ನೀಡಲು ಸಿದ್ಧವಾಗಿವೆ.
ಕರಣ್ ಕತ್ರಿ ಅವರ ಮಳಿಗೆಯಲ್ಲಿ ಪಂಜಾಬಿ ಜ್ಯೋತಿ ಮೈಸೂರಿನ ಮಹಿಳೆಯರನ್ನು ಆಕರ್ಷಿಸುತ್ತಿದೆ. ಛತ್ತೀಸಗಢ ರಾಜ್ಯದ ಪ್ರಸಿದ್ಧ ಬೆಲ್ ಮೆಟಲ್ ವಸ್ತುಗಳು ಕೇಮ್ ಸಿಂಗ್ ಅವರ ಮಳಿಗೆಯಲ್ಲಿ ಸಿಗುತ್ತವೆ. ನಂದ ಲಾಲ್ ವಿಶ್ವಕರ್ಮ ಅವರ ಮಳಿಗೆಯಲ್ಲಿ ಬಸ್ತಾರ್ ಐರನ್ ಕ್ರಾಫ್ಟ್ ಗೃಹ ಆಲಂಕಾರಿಕ ವಸ್ತುಗಳು ಆಕರ್ಷಿಸುತ್ತಿವೆ.ಇಡೀ ದೇಶದ ಕಲಾವಿದರ ಮೇಳದಲ್ಲಿ ಭಾಗವಹಿಸುತ್ತಿದ್ದು, ಮೈಸೂರಿಗರಿಗೆ ಒದಗಿಬಂದಿದ್ದು, ಹಬ್ಬದ ಖರೀದಿಗೆ, ಚಳಿಯ ವಾತಾವರಣದಿಂದ ಪಾರಾಗಲು ಬೇಕಾದ ಉಡುಪುಗಳ ಹುಡುಕಾಟವನ್ನು ತಪ್ಪಿಸಿರುವ, ಎಲ್ಲವೂ ಒಂದೇ ಸೂರಿನಡಿ ಸಿಗುವ ಜೆಎಸ್ಎಸ್ಮೈಸೂರು ಅರ್ಬನ್ಹಾತ್ನ ಕರಕುಶಲ ಮೇಳಕ್ಕೆ ನೀವೊಮ್ಮೆ ಬರಲೇಬೇಕು.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೆಎಸ್ ಎಸ್ ಮೈಸೂರು ಅರ್ಬನ್ ಹಾತ್ಒದಗಿಸುತ್ತಿದೆ.