ಸಾರಾಂಶ
ವಾರಫಲ
01.06.25 ರಿಂದ 07.06.25 ರ ವರೆಗೆ
ವಾರಫಲ
01.06.25 ರಿಂದ 07.06.25 ರ ವರೆಗೆ
ಮೇಷರಾಶಿ:
ಏಕಾಗ್ರತೆಗೆ ನಾನಾ ಪ್ರಕಾರದಲ್ಲಿ ಪರೀಕ್ಷೆಗಳು ಆಗಬಹುದು. ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಕುಟುಂಬದ ಬೆಂಬಲ ನಿಮಗೆ ಶಕ್ತಿ ನೀಡುತ್ತದೆ. ಪ್ರೀತಿಯಲ್ಲಿ ಗುಟ್ಟುಬೇಡ, ಸ್ಪಷ್ಟತೆ ಇರಲಿ. ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಚಿಂತೆಗಳು ಜಾಸ್ತಿ, ದೈಹಿಕ ಶ್ರಮ ಜಾಸ್ತಿ. ಮನಸ್ಸಿಗೆ ಉತ್ಸಾಹ ಕಡಿಮೆ. ಹಣಬಲ ಇದ್ದರೂ ಖರ್ಚುಗಳು ಹೆಚ್ಚು ಇದೆ. ವಿವೇಚನೆಯಿಂದ ನಿಭಾಯಿಸಿಕೊಳ್ಳಿ. ಎಚ್ಚರ ಇರಲಿ.
ವೃಷಭರಾಶಿ:
ಕೆಲಸದ ಜಾಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆ ಸಂತೋಷವನ್ನು ಉಂಟುಮಾಡುತ್ತವೆ. ನೌಕರಿಯಲ್ಲಿ ಬಡ್ತಿ, ಅಧಿಕಾರ ಲಾಭ ಇದೆ. ರಾಜಕೀಯ ವ್ಯಕ್ತಿಗಳಿಗೂ ಲಾಭ ಇದೆ. ಹಣಕಾಸು ವಿಷಯದಲ್ಲಿ ಜಾಗ್ರತೆ ಅಗತ್ಯವಿದೆ. ಕುಟುಂಬದಲ್ಲಿ ಚಿಕ್ಕಪುಟ್ಟ ಮನಸ್ತಾಪ ಉಂಟಾಗಬಹುದು. ಮಾತು ಆಡುವಾಗ ಎಚ್ಚರಿಕೆ ಇರಲಿ. ನಿಮ್ಮ ನಿರ್ಧಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ನಂಬಿಕೆಯಿಂದ ಮುಂದೆ ಸಾಗುವುದು ಉತ್ತಮ.
ಮಿಥುನರಾಶಿ:
ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಸ್ವಂತ ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಕೆಟ್ಟ ಅನುಭವಗಳನ್ನು ಆತ್ಮೀಯರ ಜೊತೆ ಹಂಚಿಕೊಳ್ಳುವಿರಿ. ಮನೆಯವರೊಂದಿಗೆ ಕಾಲ ಕಳೆಯುವುದರಿಂದ ಶಾಂತಿ ಪಡೆಯುವಿರಿ. ಸರ್ಕಾರದಿಂದ ಆಗಬೇಕಾದ ಕೆಲಸಗಳು ನಿಧಾನವಾಗುತ್ತದೆ. ಆದರೆ ಕೆಲಸವಾಗುತ್ತದೆ.
ಕಟಕರಾಶಿ:
ವರ್ಗಾವಣೆ ಅಥವಾ ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ ಈಗ ಅನುಕೂಲವಾಗಬಹುದು. ನ್ಯಾಯಾಧೀಶರಿಗೆ, ವಕೀಲಿ ವೃತ್ತಿ ಮಾಡುವವರಿಗೆ ಸಮಯ ಒಳ್ಳೆಯದು. ಒಳ್ಳೆಯ ಅಧಿಕಾರ ಪದವಿ ಸಿಗುತ್ತದೆ. ಮಾತುಗಳು ಹೊಸ ಅವಕಾಶಗಳನ್ನು ತಂದೀತು. ಕಾನೂನು ಕೆಲಸದಲ್ಲಿ ಎಚ್ಚರಿಕೆ ಇರಲಿ. ಹಣಕಾಸು ಒತ್ತಡದಿಂದ ಚಿಕ್ಕ ಏರುಪೇರು ಆಗಬಹುದು. ಕೆಲಸಗಳನ್ನು ಧಾವಂತದಲ್ಲಿ ಮಾಡಬೇಡಿ.
ಸಿಂಹರಾಶಿ:
ಸಣ್ಣ ಖರ್ಚು ಕೂಡ ದೊಡ್ಡದಾಗಬಹುದು. ಕುಟುಂಬದವರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ದೂರದ ಸಂಬಂಧಿಯವರಿಂದ ಸಂವೇದನೆಗಳ ಬದಲಾವಣೆ ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿ ಗಂಭೀರತೆ ಬೆಳೆಯಲಿದೆ. ಸಿಕ್ಕ ಯಶಸ್ಸನ್ನು ಲಾಭವಾಗಿ ಪರಿವರ್ತಿಸುವಿರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ಚರಿಯನ್ನು ಉಂಟುಮಾಡೀತು. ಮೋಹದಿಂದ ಸರಿ ತಪ್ಪುಗಳ ವಿವೇಚನೆ ದೂರಾಗುವುದು. ಎಚ್ಚರಿಕೆ ಇರಲಿ.
ಕನ್ಯಾರಾಶಿ:
ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಖರ್ಚಿಲ್ಲದೇ ಎಲ್ಲ ಓಡಾಟವನ್ನು ಮಾಡುವ ಯೋಚನೆ. ಕೆಲಸದಲ್ಲಿ ನಿಮ್ಮ ಚುರುಕು ಮೆಚ್ಚುಗೆಯನ್ನು ಗಳಿಸಬಹುದು. ಹಳೆಯ ಹೂಡಿಕೆಗಳು ಲಾಭದ ಸಂಕೇತ ತೋರಿಸುತ್ತವೆ. ಮನೆಯ ವಿಷಯದಲ್ಲಿ ಹೆಚ್ಚು ಸಮಯ ಕೊಡ ಬೇಕಾಗಬಹುದು. ಧನಲಾಭ ಉಂಟಾಗುತ್ತದೆ. ರಾಜಕೀಯ ಕ್ಷೇತ್ರದವರಂತೂ ಹೆಚ್ಚಿನ ಕಾಳಜಿ ವಹಿಸಬೇಕು.
ತುಲಾರಾಶಿ:
ಮೇಲಧಿಕಾರಿಗಳಿಂದ ಕ್ಷಣಕಾಲ ತಪ್ಪಿಸಿಕೊಂಡರೆ ಅಷ್ಟೇ ಸಾಕು. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಹೂಡಿಕೆಗೆ ಮೊದಲು ಎಲ್ಲವನ್ನೂ ಅಧ್ಯಯನ ಮಾಡಿ. ಕುಟುಂಬದವರೊಂದಿಗೆ ಕಳೆಯುವ ಸಮಯ ಹೃದಯ ತಣಿಸುತ್ತದೆ. ಪ್ರೇಮ ಸಂಬಂಧದಲ್ಲಿ ಬುದ್ಧಿವಂತಿಕೆ ಮುಖ್ಯ. ನಿಮ್ಮ ನಿಷ್ಠೆ ಮತ್ತು ಶ್ರಮವು ಮೆರೆದೀತು. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ಧನಾಗಮನ ಉತ್ತಮವಾಗಿದೆ. ವಿವಾಹಾದಿ ಶುಭಕಾರ್ಯಗಳು ನಡೆಯುತ್ತದೆ. ಮನೆಯಲ್ಲಿ ಉಲ್ಲಾಸದ ವಾತಾವರಣ. ಕೌಟುಂಬಿಕ ಸುಖಶಾಂತಿ ಇದೆ.
ವೃಶ್ಚಿಕರಾಶಿ:
ನಿಮ್ಮ ಹಠವನ್ನು ಮುಂದಿಡುವುದು ಬೇಡ. ಒಂಟಿಯಾಗಿಯೇ ಇರಬೇಕಾಗುವುದು. ಕೆಲಸದಲ್ಲಿ ಅವಕಾಶಗಳು ಸಿಗಬಹುದು ಆದರೆ ತೀರ್ಮಾನದಲ್ಲಿ ತಾಳ್ಮೆ ಅಗತ್ಯ. ಖರ್ಚುಗಳು ನಿಮ್ಮ ಮೇಲೆ ಒತ್ತಡ ತರುತ್ತವೆ. ಈಗ ಸ್ವಲ್ಪ ಎಡರುತೊಡರುಗಳ ಜೀವನ. ಯಾವ ಕೆಲಸಕ್ಕೆ ಕೈಹಾಕಿದರೂ ನಿಧಾನ. ಅಡ್ಡಿಗಳು ಎದುರಾಗುತ್ತದೆ. ವಿವಾಹಾದಿ ಶುಭಕಾರ್ಯಗಳು ಮುಂದಕ್ಕೆ ಹೋಗುತ್ತದೆ. ನೌಕರಿಯಲ್ಲಿ ನಿಧಾನಪ್ರಗತಿ.
ಧನಸ್ಸುರಾಶಿ:
ಅಲ್ಪ ಜ್ಞಾನದವರ ಸಂಗದಿಂದ ಸ್ವಾಭಿಮಾನ ಧಕ್ಕೆ ಬರುವುದು. ಮುಜುಗರವನ್ನು ಎದುರಿಸಬೇಕಾಗಬಹುದು. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಧೈರ್ಯದಿಂದ ಕೆಲಸದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ವಿವಾಹಾದಿ ಶುಭಕಾರ್ಯಗಳು ನಡೆಯುತ್ತದೆ. ನೌಕರಿಯಲ್ಲಿ ಬಡ್ತಿ ಇದೆ. ಯಶಸ್ಸು ಇದೆ. ಶತ್ರುಗಳು ದೂರವಾಗುತ್ತಾರೆ.
ಮಕರರಾಶಿ:
ಹೊಸ ವಸ್ತ್ರದ ಖರೀದಿಯಾಗಲಿದೆ. ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿದರೂ ಮನಸ್ಸು ಬೇರೆಡೆ ಇರಬಹುದು. ಹಣಕಾಸು ಸ್ಥಿತಿಯಲ್ಲಿ ನಿರ್ವಹಣಾ ಜಾಣ್ಮೆ ಅಗತ್ಯ. ಕೈ ಮೀರಿದ ಆರೋಗ್ಯವನ್ನು ನಿಯಂತ್ರಣಕ್ಕೆ ತರಲಾಗದು. ಸಹೋದ್ಯೋಗಿಯಿಂದ ಸ್ಪರ್ಧಾತ್ಮಕ ಮನೋಭಾವನೆ ಎದುರಾಗಬಹುದು.
ವಾಹನದಿಂದ ಲಾಭ ಇದೆ. ಭೂಮಿ ಸಂಬಂಧಿಸಿದ ವ್ಯವಹಾರ ಮಾಡಲು ಈಗ ಅನುಕೂಲ. ಉತ್ಸಾಹ ಹೆಚ್ಚಲಿದೆ.
ಕುಂಭರಾಶಿ:
ಉದ್ಯೋಗದಲ್ಲಿ ಚುರುಕು ಮತ್ತು ಯೋಜನೆ ಮುಖ್ಯ. ಪ್ರೀತಿಯಲ್ಲಿ ಸಹನಶೀಲತೆಯಿಂದ ಸ್ಪಂದಿಸಿ, ಅತಿ ವಿಚಾರ ಬೇಡ. ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ. ನಿಮ್ಮನ್ನು ನೀವು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದು ಶ್ರೇಯಸ್ಕರ. ನಿಮ್ಮ ತಂದೆಯ ಜೊತೆ ಸ್ನೇಹದ ಸಂಬಂಧವನ್ನು ಇಟ್ಟುಕೊಳ್ಳುವಿರಿ. ಯಾವುದೇ ಅಡೆತಡೆಗಳು ಬಂದರೂ ಗುರುವಿನಿಂದ ನಿವಾರಣೆ ಆಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದವರಿಗೆ ಲಾಭ ಇದೆ.
ಮೀನರಾಶಿ:
ಉದ್ಯೋಗ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಹಣಕಾಸು ಸಂಬಂಧಿತ ವಿಷಯಗಳು ನಿಮ್ಮ ಗಮನಕ್ಕೆ ಬರುತ್ತವೆ. ಫಂಗಲ್ ಸೋಂಕು, ಬ್ಯಾಕ್ಟೀರಿಯಾ ಸೋಂಕು ಇಂಥವು ಉಪಶಮನ ವಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಕೇತು ಧನಾಗಮನ ಸೂಚಿಸುತ್ತಾನೆ. ಗುರು ಒತ್ತಡಗಳನ್ನು ಕೊಡುತ್ತಾನೆ. ಎಚ್ಚರಿಕೆಯಿಂದ ನಿಭಾಯಿಸಿ. ಕೆಲಸದಲ್ಲಿ ಎಚ್ಚರಿಕೆ ಇರಲಿ.