ತಮಿಳು ಬಿಗ್ಬಾಸ್ನಲ್ಲಿ ಸ್ಪರ್ಧಿ ವಿ.ಜೆ ಪಾರ್ವತಿ ಮಧ್ಯರಾತ್ರಿ ಸಹ ಸ್ಪರ್ಧಿ ಕಮರುದ್ದೀನ್ ಅವರ ಕಂಬಳಿಯೊಳಗೆ ನುಸುಳಿದ ಘಟನೆ ನಡೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಪ್ರಸಾರವಾಗಿದ್ದು, ಟಿಆರ್ಪಿಗಾಗಿ ಅಸಭ್ಯತೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ
- Home
- News
- State
- State News Live: Bigg Boss ಮನೆಯಲ್ಲಿ ನಡುರಾತ್ರಿ ಇದೇನಿದು? ಒಟ್ಟಿಗೇ ಮಲಗಿ ಸಿಕ್ಕಿಬಿದ್ದ ಸ್ಪರ್ಧಿಗಳು! ಇದೆಂಥ ದುರಂತ?
State News Live: Bigg Boss ಮನೆಯಲ್ಲಿ ನಡುರಾತ್ರಿ ಇದೇನಿದು? ಒಟ್ಟಿಗೇ ಮಲಗಿ ಸಿಕ್ಕಿಬಿದ್ದ ಸ್ಪರ್ಧಿಗಳು! ಇದೆಂಥ ದುರಂತ?

ಬೆಂಗಳೂರು (ಡಿ.26): ಒಂದೆಡೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಶುಕ್ರ ವಾರ ಸಂಜೆ ತೆರಳಲಿದ್ದಾರೆ. ಆದರೆ ಈ ವೇಳೆ ಅವಕಾಶ ಸಿಕ್ಕರೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತ್ರ ಅವರು ಹೈಕಮಾಂಡ್ ಜತೆ ಚರ್ಚಿಸುವ' ಸಾಧ್ಯತೆ ಇದೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 26th December:Bigg Boss ಮನೆಯಲ್ಲಿ ನಡುರಾತ್ರಿ ಇದೇನಿದು? ಒಟ್ಟಿಗೇ ಮಲಗಿ ಸಿಕ್ಕಿಬಿದ್ದ ಸ್ಪರ್ಧಿಗಳು! ಇದೆಂಥ ದುರಂತ?
Karnataka News Live 26th December:ಮೇಕಿಂಗ್ನಿಂದ ಕತೆವರೆಗೆ.. ಟಾಕ್ಸಿಕ್’ನಿಂದ ‘ಕ್ರಿಮಿನಲ್’ವರೆಗೆ - 2026ರ ಬಹು ನಿರೀಕ್ಷಿತ ಸಿನಿಮಾಗಳು
2026ಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಎ ಫಾರ್ ಆನಂದ್’, ‘ಡ್ಯಾಡಿ’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಬಹುದು. ಡಾಲಿ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’, ‘ಜಿಂಗೋ’ ಸಿನಿಮಾಗಳು ಬರಬಹುದು.
Karnataka News Live 26th December:BBK 12 - ಗಿಲ್ಲಿ ನಟನ ಮದುವೆ ವಿಷಯ; ಸೀಕ್ರೇಟ್ ರಿವೀಲ್ ಮಾಡಿಯೇ ಬಿಟ್ರು ತಂದೆ-ತಾಯಿ!
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಸಖತ್ ಆಗಿ ಆಡುತ್ತಿದ್ದಾರೆ. ಈಗ ಗಿಲ್ಲಿ ನಟನ ತಂದೆ-ತಾಯಿ ಮನೆಗೆ ಬಂದಿದ್ದು, ಮದುವೆ ವಿಚಾರ ಚರ್ಚೆ ಆಗಿದೆ. ಅಂದಹಾಗೆ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ಮದುವೆ ಬಗ್ಗೆ ಮಾತನಾಡಿದ್ದಾರೆ.
Karnataka News Live 26th December:ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಫೋಟ, ಹಲವು ಆಯಾಮದಲ್ಲಿ ಪೊಲೀಸರ ತನಿಖೆ!
ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Karnataka News Live 26th December:ದ್ವೇಷಪೂರಿತ ದಾಳಿ ತಡೆಗೆ ರಕ್ಷಾ ಕವಚ ಈ ವಿಧೇಯಕ - ಸುಪ್ರೀಂ ಕೋರ್ಟ್ ವಕೀಲ ಸಂಕೇತ ಏಣಗಿ ಲೇಖನ
ಈ ವಿಧೇಯಕ ಶಿಕ್ಷೆ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ದ್ವೇಷ ಹರಡುವಿಕೆ ತಡೆಯುವ ಸಮಗ್ರ ಉದ್ದೇಶವನ್ನೂ ಹೊಂದಿದೆ. ದ್ವೇಷ ಭಾಷಣದ ಪ್ರಸಾರ, ಪ್ರಕಟಣೆ ಅಥವಾ ಪ್ರಚಾರವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.
Karnataka News Live 26th December:ಬಸ್ ದುರಂತವಾದ್ರೂ ಎಚ್ಚೆತ್ತುಕೊಳ್ಳದ KSRTC, ಫೋನ್ ಕಿವಿಯಲ್ಲಿಟ್ಟುಕೊಂಡೇ ಡ್ರೈವಿಂಗ್!
ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ, 40 ಪ್ರಯಾಣಿಕರ ಜೀವವನ್ನು ಪಣಕ್ಕಿಟ್ಟು ಡ್ರೈವಿಂಗ್ ಮಾಡುವಾಗಲೇ ಮೊಬೈಲ್ನಲ್ಲಿ ಮಾತನಾಡಿದ್ದಾನೆ. ಧಾರವಾಡದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.
Karnataka News Live 26th December:ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು - ಎನ್.ರವಿಕುಮಾರ್ ಲೇಖನ
ವಿಧೇಯಕಲ್ಲಿ ಜಾತಿ ಎಂಬ ಪದವನ್ನು ಏಕೆ ಕೈಬಿಡಲಾಗಿದೆ? ಜಾತಿ ವಿರುದ್ಧ ದ್ವೇಷ ಕಾರುವುದು, ದ್ವೇಷ ಭಾಷಣ, ದ್ವೇಷ ಅಪರಾಧದ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಾನೂನು ತಜ್ಞರು, ಕಾಯ್ದೆ ಮಾಡಿದವರು ಸ್ಪಷ್ಟಪಡಿಸಬೇಕು.
Karnataka News Live 26th December:ಚಿತ್ರದುರ್ಗ ಬಸ್ ದುರಂತ - ಮೃತ ಸಂಖ್ಯೆ 7ಕ್ಕೆ ಏರಿಕೆ, ಬಸ್ ಡ್ರೈವರ್ ರಫೀಕ್ ಸಾವು
ಚಿತ್ರದುರ್ಗದ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಮೊಹಮದ್ ರಫೀಕ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಟ್ಟು ಕರಕಲಾದ ಮೃತದೇಹಗಳನ್ನು ಡಿಎನ್ಎ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.
Karnataka News Live 26th December:ಜಗದ್ಗುರುಗಳ ಜೊತೆ ಕನ್ನಡ ನಟಿ ಪಲ್ಲವಿ ಮತ್ತಿಘಟ್ಟ 1 ಗಂಟೆ ಮಾತುಕತೆ ಸುಳ್ಳು - ಶೃಂಗೇರಿ ಪೀಠ ಸ್ಪಷ್ಟನೆ
Actress Pallavi Mattighatta: ಕನ್ನಡ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿ ಕ್ಷೇತ್ರದ ಗುರುಗಳ ಜೊತೆ ಒಂದು ಗಂಟೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಠದವರು ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾದರೆ ನಡೆದಿದ್ದು ಏನು?
Karnataka News Live 26th December:ವರ್ಷಾಂತ್ಯಕ್ಕೆ ಭರ್ತಿಯಾದ ಚಿತ್ರಮಂದಿರಗಳು - ಸ್ಯಾಂಡಲ್ವುಡ್ನಲ್ಲಿ ಕ್ರಿಸ್ಮಸ್ ಸಂಭ್ರಮ
ಡಿಸೆಂಬರ್ ಮಾಸದಲ್ಲಿ ಬಿಡುಗಡೆಯಾದ ಮೂರು ಸ್ಟಾರ್ ಸಿನಿಮಾಗಳು ಚಿತ್ರರಂಗಕ್ಕೆ ತಕ್ಕಮಟ್ಟಿನ ಚೈತನ್ಯ ತಂದಿವೆ. ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿ ಸ್ಯಾಂಡಲ್ವುಡ್ ಕಳೆಗಟ್ಟುತ್ತಿದೆ.
Karnataka News Live 26th December:ಯಶ್ ಎದುರು ಧುರಂಧರ್ 2 ಬ್ಲಾಕ್ಬಸ್ಟರ್ ಮಾಡಲು ನಿರ್ಮಾಪಕರ ಭರ್ಜರಿ ಪ್ಲಾನ್, 2000 ಕೋಟಿ ಪಕ್ಕಾ ಎಂದ ಜನ!
ರಣವೀರ್ ಸಿಂಗ್ ಅವರ 'ಧುರಂಧರ್ 2' ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. 640 ಕೋಟಿ ಗಳಿಸಿದ ಮೊದಲ ಭಾಗದ ನಂತರ, ಸೀಕ್ವೆಲ್ ಪೋಸ್ಟ್ ಪ್ರೊಡಕ್ಷನ್ನಲ್ಲಿದೆ.
Karnataka News Live 26th December:BBK 12 - ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಫ್ಯಾಮಿಲಿ ರೌಂಡ್ ಇದ್ದು, ಈಗಾಗಲೇ ಮನೆಗೆ ಎಲ್ಲ ಸ್ಪರ್ಧಿಗಳ ಮನೆಯವರು ಎಂಟ್ರಿ ಕೊಟ್ಟಿದ್ದಾರೆ. ಈಗ ಮಾಳು ನಿಪನಾಳ ಅವರ ಕುಟುಂಬ ಕೂಡ ದೊಡ್ಮನೆಗೆ ಬಂದಿದೆ.
Karnataka News Live 26th December:Halli Power Show Winner - ಹಳ್ಳಿ ಪವರ್ ಶೋ ಗ್ರ್ಯಾಂಡ್ ಫಿನಾಲೆಯಲ್ಲಿ ಗೆಲ್ಲೋರು ಯಾರು?
Halli Power Show: ಸಿಟಿ ಲೈಫ್ ಬಿಟ್ಟು, ಹಳ್ಳಿಯಲ್ಲಿ ಜೀವನ ಮಾಡುವ ಕಥೆಯೇ ‘ಹಳ್ಳಿ ಪವರ್’ ರಿಯಾಲಿಟಿ ಶೋನ ತಿರುಳು. ಈಗ ಈ ಶೋ ಗ್ರ್ಯಾಂಡ್ ಫಿನಾಲೆ ಸಮಯ ಹತ್ತಿರ ಬಂದಿದೆ. ಹಾಗಾದರೆ ಯಾರು ವಿನ್ನರ್ ಆಗ್ತಾರೆ?
Karnataka News Live 26th December:ದಾವಣಗೆರೆಯ ಶೈಕ್ಷಣಿಕ ಪುನರುಜ್ಜೀವನದ ಶಿಲ್ಪಿ ಶಾಮನೂರು
ಡಾ.ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಸರಳ ಸಜ್ಜನ, ಸಾತ್ವಿಕ ರಾಜಕಾರಣಿಯಾಗಿದ್ದರು. ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲೂ ಅಚ್ಚಳಿಯದ ಮುದ್ರೆ ಒತ್ತಿದ್ದರು. ಅವರು ದೇಶದ ಯಾವುದೇ ರಾಜ್ಯ ವಿಧಾನಸಭೆ ಪ್ರತಿನಿಧಿಸುವ ಶಾಸಕರ ಪೈಕಿ ಅತ್ಯಂತ ಹಿರಿಯರು ಎನ್ನುವುದು ವಿಶೇಷ.
Karnataka News Live 26th December:ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಪ್ರಸ್ತುತ ದಿನಮಾನಗಳಲ್ಲಿ ನಾವು ಆಧುನಿಕ ಆಹಾರ ಪದ್ಧತಿ ಅಳವಡಿಕೆ ಮಾಡಿಕೊಂಡಿದ್ದೇವೆ. ಆದರೆ, ಯಾವುದು ಶುದ್ಧ ಮತ್ತು ಯಾವುದು ಅಶುದ್ಧ ಎಂಬುದನ್ನು ಪತ್ತೆ ಮಾಡುವುದೇ ಸವಾಲಿನ ಸಂಗತಿ ಆಗಿದೆ.
Karnataka News Live 26th December:ಒಬ್ಬ ಮಾರ್ಕ್, ಎರಡು ರಾತ್ರಿ, ಒಂದು ಹಗಲು: ಇಲ್ಲಿದೆ ಪವರ್ಫುಲ್ ಆ್ಯಕ್ಷನ್ ಸಿನಿಮಾ 'ಮಾರ್ಕ್' ವಿಮರ್ಶೆ
ಹೀರೋನ ಒಂದು ಏಟಿಗೇ ರಕ್ತ ಕಾರುವ, ಗಾಳಿಯಲ್ಲಿ ಹಾರುವ ಹತ್ತಾರು ವಿಲನ್ಗಳು, ನೆಲಕ್ಕೆ ಗುದ್ದಿದರೆ ನೆಲವೇ ಒಡೆಯುವಂಥಾ ಹೀರೋ ಕೇಂದ್ರಿತ ವೈಭವೀಕರಣಗಳು ಸಾಕಷ್ಟಿವೆ. ಬೋನಸ್ನಂತೆ ಡ್ಯಾನ್ಸಿಂಗ್ ಸ್ಟೈಲ್ ಫೈಟ್ ಇದೆ.
Karnataka News Live 26th December:ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್ ಆಗಿದ್ದು ಹೇಗೆ?: ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ರಾಜ್ಯದಲ್ಲಿ ಇರುವುದು ಕಾಂಗ್ರೆಸ್ನ ಲೂಟಿ ಸರ್ಕಾರ. ಒಬ್ಬ ಆರ್ಥಿಕ ಸಚಿವರಿಗೆ ಗೃಹಲಕ್ಷ್ಮೀ ಯೋಜನೆಯ ₹5 ಸಾವಿರ ಕೋಟಿ ಬಗ್ಗೆ ಮಾಹಿತಿಯೇ ಇಲ್ಲವೆಂದರೆ ಹೇಗೆ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Karnataka News Live 26th December:ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿಂದನೆ ಪ್ರಕರಣ: ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾಗೆ ಸಿಸಿಬಿ ಪತ್ರ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ ಸಂಬಂಧ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಮಾಲೀಕತ್ವದ ಮೆಟಾ ಕಂಪನಿಗೆ ಅಧಿಕಾರಿಗಳು ಪತ್ರ ಬರೆದು ಮಾಹಿತಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.
Karnataka News Live 26th December:‘ಹೇಟ್’ಬುಕ್ ಕಮೆಂಟ್ಗಳಿಗೆ ದ್ವೇಷದ ಬಿಲ್ ಕಡಿವಾಣ?
ಶರವೇಗವಾಗಿ ಮೊಬೈಲ್ ಫೋನ್ಗಳನ್ನು ಸ್ಕ್ರೋಲ್ ಮಾಡುವ ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಂಬುದು ನಮ್ಮನ್ನು ಪರಸ್ಪರ ಬೆಸೆಯುವ ವೇದಿಕೆಯಾಗಬೇಕಿತ್ತು. ದುರ್ದೈವವೆಂದರೆ, ಅದು ಈಗ ವಿಷ ಉಗುಳುವ ಪೆಡಂಭೂತವಾಗಿಬಿಟ್ಟಿದೆ.
Karnataka News Live 26th December:ಚುನಾವಣೆ ಯಾವಾಗ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ: ಬಿ.ವೈ.ವಿಜಯೇಂದ್ರ ವಿಶ್ವಾಸ
ವಾಜಪೇಯಿ ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು ಬಿವೈವಿ.