ಮಳೆ-ಗಾಳಿಗೆ ತಾತ್ಕಾಲಿಕ ಶೆಡ್ಗಳೆಲ್ಲ ಚೆಲ್ಲಾಪಿಲ್ಲಿ: 500 ಕುಟುಂಬಗಳು ಅತಂತ್ರ!ಮಳೆ, ಗುಡುಗು, ಮಿಂಚು, ಸಿಡಿಲಿನ ಆರ್ಭಟ ಜೊತೆಗೆ ಜೋರಾಗಿ ಬೀಸಿದ ಗಾಳಿಯಿಂದಾಗಿ ತಾತ್ಕಾಲಿಕ ಶೆಡ್ಗಳ ತಗಡಿನ ಶೀಟುಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪರಿಣಾಮ ರಾಮಕೃಷ್ಣ ಹೆಗಡೆ ನಗರದ ನೂರಾರು ಸಂತ್ರಸ್ತ ಕುಟುಂಬಗಳು ಸಾಮಾನು, ಸರಂಜಾಮು ಸಮೇತ ವರ್ತುಲ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಮೂಲ ಸ್ಥಳಕ್ಕೆ ಮರಳಿವೆ.