ಬಿಜೆಪಿ ಅಭ್ಯರ್ಥಿ ಪರ ನಾಗರತ್ನ ಕುಪ್ಪಿ ಪ್ರಚಾರ

| Published : May 06 2024, 12:36 AM IST

ಬಿಜೆಪಿ ಅಭ್ಯರ್ಥಿ ಪರ ನಾಗರತ್ನ ಕುಪ್ಪಿ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಇನ್ನೂ ಮಾಡಬೇಕಾದದ್ದು ಬಹಳ ಇದೆ. ಅದಕ್ಕಾಗಿ ದೇಶ ಅಭಿವೃದ್ಧಿ ಹೊಂದಲು ಬಿಜೆಪಿ ಪಕ್ಷಕ್ಕೆ ಮತ ನೀಡಿ.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಗುರುಮಠಕಲ್ ಮತಕ್ಷೇತ್ರದ ಧರ್ಮಪುರ, ಧರ್ಮಪುರ ತಾಂಡಾ ಮತ್ತು ಬೆಟ್ಟದಹಳ್ಳಿ ಗ್ರಾಮಗಳಲ್ಲಿ ಕಲಬುರಗಿ ಲೋಕಸಭೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ಉಮೇಶ್ ಜಾಧವ ಪರ ಬಿಜೆಪಿ ಪಕ್ಷದ ಮಾಜಿ ಉಪಾಧ್ಯಕ್ಷ ನಾಗರತ್ನ ಕುಪ್ಪಿ ಅವರು ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಇನ್ನೂ ಮಾಡಬೇಕಾದದ್ದು ಬಹಳ ಇದೆ. ಅದಕ್ಕಾಗಿ ದೇಶ ಅಭಿವೃದ್ಧಿ ಹೊಂದಲು ಬಿಜೆಪಿ ಪಕ್ಷಕ್ಕೆ ಮತ ನೀಡಿ, ಡಾ. ಉಮೇಶ ಜಾಧವ ಅವರನ್ನು ಬಹುಮತಗಳಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು.

ಉಜ್ವಲಾ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ, ಯುವಕರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸ್ವಯಂ ಉದ್ಯೋಗ ಮಾಡಲು ಸಾಲ ನೀಡಿರುವುದು, ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಬಡವರಿಗೆ ಆರೋಗ್ಯ ಕಾಪಾಡಲು ಆಯುಷ್ಮಾನ್ ಭಾರತ್ ಕಾರ್ಡ್, ಪ್ರತಿ ಮನೆಗೂ ನೀರು ಒದಗಿಸುವ ಜಲ ಜೀವನ್ ಮಷಿನ್ ಯೋಜನೆ, ಸಾಮಾನ್ಯ ಜನರಿಗೂ ಬ್ಯಾಂಕ್ ಸೌಲಭ್ಯಕ್ಕೆ ಅವಕಾಶ ನೀಡುವ ಜನಧನ ಯೋಜನೆ ಹೀಗೆ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಪ್ರಧಾನಿ ಮೋದಿಯವರ ಆಡಳಿತದಲ್ಲಿ ಭಾರತದ ಗೌರವ ವಿಶ್ವಮಟ್ಟದಲ್ಲಿ ಹೆಚ್ಚಾಗಿರುವುದು ನಮ್ಮ ಹೆಮ್ಮೆ. ಅದಕ್ಕಾಗಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಾದರೆ ನಮ್ಮ ಅಭ್ಯರ್ಥಿ ಜಾಧವ ಅವರನ್ನು ಬಹುಮತಗಳಿಂದ ಆರಿಸಿ ಕಳುಹಿಸಬೇಕೆಂದು ಹೇಳಿದರು.

ಸುರೇಶ್ ರಾಠೋಡ, ಲಿಂಗರೆಡ್ಡಿ, ಬುಗ್ಗಪ್ಪ, ಗೋಪಾಲ್ ಕಿಸನ್, ಶಂಕರ್ ಶರಣು ಸೇರಿದಂತೆ ಹಲವಾರು ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರು ಇದ್ದರು.