ಕೊಲೆ ಆರೋಪಿ ದರ್ಶನ್‌ಗೆ ಸಿಐಎಸ್‌ಎಫ್‌ ಭದ್ರತೆ ವಿವಾದ

| Published : Jul 27 2025, 01:52 AM IST

ಸಾರಾಂಶ

‘ಡೆವಿಲ್‌’ ಸಿನಿಮಾ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ನಟ ದರ್ಶನ್‌ ಅಲ್ಲಿ 10ಕ್ಕೂ ಹೆಚ್ಚು ದಿನ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ.

- ಥಾಯ್ಲೆಂಡಿಂದ ಬಂದ ವೇಳೆ ಏರ್ಪೋರ್ಟಲ್ಲಿ ಭದ್ರತೆ

ಬೆಂಗಳೂರು: ‘ಡೆವಿಲ್‌’ ಸಿನಿಮಾ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ನಟ ದರ್ಶನ್‌ ಅಲ್ಲಿ 10ಕ್ಕೂ ಹೆಚ್ಚು ದಿನ ಶೂಟಿಂಗ್‌ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ವೇಳೆ ಬೆಂಗಳೂರು ವಿಮಾನ ನಿಲ್ದಾಣದಿಂದ ದರ್ಶನ್ ಸಿಐಎಸ್‌ಎಫ್‌ (ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌) ಭದ್ರತೆಯಲ್ಲಿ ಅವರು ಹೊರಬಂದಿರುವುದು ವಿವಾದಕ್ಕೆ ಕಾರಣವಾಗಿದೆ.

‘ಕೊಲೆ ಆರೋಪಿಯಾದರೂ ದರ್ಶನ್‌ಗೆ ವಿವಿಐಪಿ ಭದ್ರತೆ ಏಕೆ?’ ಎಂದು ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್‌, ‘ದರ್ಶನ್‌ಗೆ ಸಿಐಎಸ್‌ಎಫ್‌ ಭದ್ರತೆ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರ ಬೇಲ್ ರದ್ದತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ಇದೀಗ ದರ್ಶನ್ ಭಾರತಕ್ಕೆ ವಾಪಸಾಗಿದ್ದು, ಜಾಮೀನು ತೀರ್ಪಿನ ಕುರಿತು ಕುತೂಹಲ ಉಂಟಾಗಿದೆ.