ಸಾರಾಂಶ
ಕಿರುತೆರೆ ಸಹ ಕಲಾವಿದೆಯ ಮೇಲೆ ನಟ ಮಡೆನೂರು ಮನು ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಕೃತ್ಯ ನಡೆದ ಇಲ್ಲಿನ ಖಾಸಗಿ ಲಾಡ್ಜ್ ಗೆ ಶನಿವಾರ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸಂತ್ರಸ್ತೆಯ ಜತೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಮಹಜರು ಪ್ರಕ್ರಿಯೆ ನಡೆಸಿದರು.
ಶಿಕಾರಿಪುರ : ಮದುವೆ ಆಗುವುದಾಗಿ ನಂಬಿಸಿ ಕಿರುತೆರೆ ಸಹ ಕಲಾವಿದೆಯ ಮೇಲೆ ನಟ ಮಡೆನೂರು ಮನು ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಕೃತ್ಯ ನಡೆದ ಇಲ್ಲಿನ ಖಾಸಗಿ ಲಾಡ್ಜ್ ಗೆ ಶನಿವಾರ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸಂತ್ರಸ್ತೆಯ ಜತೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂದಿಸಿದಂತೆ ಮಹಜರು ಪ್ರಕ್ರಿಯೆ ನಡೆಸಿದರು.
ಪಟ್ಟಣದಲ್ಲಿ ಕಳೆದ ವರ್ಷ ನ.28 ರಂದು ನಡೆದ ಕಾರ್ಯಕ್ರಮಕ್ಕೆ ಮಡೆನೂರು ರವಿ ಕೆಲ ಕಾಮಿಡಿ ನಟರ ಜತೆ ನನ್ನನ್ನು ಕರೆದುಕೊಂಡು ಬಂದು ಕಾರ್ಯಕ್ರಮ ನಡೆಸಿದ್ದು ನಂತರದಲ್ಲಿ ತಂಗಿದ್ದ ಖಾಸಗಿ ಲಾಡ್ಜ್ಗೆ ಸಂಭಾವನೆ ನೀಡುವ ನೆಪದಲ್ಲಿ ರೂಮಿಗೆ ಆಗಮಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ವತ್ಸಲಾ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಶನಿವಾರ ಮದ್ಯಾಹ್ನದ ವೇಳೆಗೆ ಸಂತ್ರಸ್ಥೆಯ ಜತೆಗೆ ಆಗಮಿಸಿದ ಪೊಲೀಸರು ಸಂತ್ರಸ್ಥೆ ಉಳಿದುಕೊಂಡಿದ್ದ ಖಾಸಗಿ ಲಾಡ್ಜನ ಕೊಠಡಿಯನ್ನು ಸಂಪೂರ್ಣ ಪರಿಶೀಲಿಸಿದರು.
ನಂತರದಲ್ಲಿ ಲಾಡ್ಜನ ಮಾಲೀಕರಿಗೆ ಕಳೆದ ನ.28 ರಿಂದ 30 ರವರೆಗಿನ ಲೆಡ್ಜರ್ ಪುಸ್ತಕ ದೃಡೀಕರಿಸಿ ನೀಡುವಂತೆ, ರಿಸೆಪ್ಶನ್ ಸೆಂಟರ್ ಹಾಗೂ ಹೋಟೆಲ್ ರೂಮ್ ಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪೆನ್ ಡ್ರೈವ್ಗೆ ವರ್ಗಾವಣೆ ಮಾಡಿ ನೀಡುವಂತೆ, ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಮಡೆನೂರು ಮನು ಹಾಗೂ ಸಂತ್ರಸ್ತೆ ವತ್ಸಲಾ ರವರಿಂದ ಪಡೆದುಕೊಂಡ ದಾಖಲೆ ನೀಡುವಂತೆ ಹಾಗೂ ಆ ಸಂದರ್ಬದಲ್ಲಿ ಲಾಡ್ಜನಲ್ಲಿ ಕರ್ತವ್ಯ ನಿರತರಾಗಿದ್ದ ಮ್ಯಾನೇಜರ್, ರೂಮ್ ಬಾಯ್ ವಿಚಾರಣೆಗೆ ಠಾಣೆಗೆ ಕಳುಹಿಸಿಕೊಡುವಂತೆ ನೋಟಿಸ್ ನೀಡಿದ್ದಾರೆ.