ಸಾರಾಂಶ
ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ಭೂತಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿದ್ದಾರೆ.
ಸಿನಿವಾರ್ತೆ
‘ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’ನಲ್ಲಿ ನಾಯಕಿಯಾಗಿ ನಟಿಸಿದ್ದ ಶ್ರೀನಿಧಿ ಶೆಟ್ಟಿ ತಮ್ಮ ಹುಟ್ಟೂರಾದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಭೂತ ಕೋಲದಲ್ಲಿ ಭಾಗವಹಿಸಿದ್ದಾರೆ. ಇಷ್ಟಾರ್ಥ ಈಡೇರಿದರೆ ಕೋಲ ನೀಡುವುದಾಗಿ ಶ್ರೀನಿಧಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ದೈವಗಳಿಗೆ ಕೋಲ ನೀಡಿದ್ದಾರೆ.
ಈ ವೇಳೆ ದೈವಗಳು, ‘ಇನ್ನಷ್ಟು ಎತ್ತರಕ್ಕೆ ಏರುತ್ತೀಯಾ, ಯಶಸ್ಸು ಸಿಗಲಿದೆ’ ಎಂದು ಆಶೀರ್ವದಿಸಿವೆ ಎನ್ನಲಾಗಿದೆ. ಸದ್ಯ ತೆಲುಗಿನ ಒಂದು ಚಿತ್ರ ಹಾಗೂ ಚೇರನ್ ನಿರ್ದೇಶನದ ಸುದೀಪ್ ನಟನೆಯ ಚಿತ್ರ ಶ್ರೀನಿಧಿ ಕೈಯಲ್ಲಿವೆ.