ಸಾರಾಂಶ
ಪರಿಸರ ಮಹತ್ವ ಸಾರುವ ‘ಪಾಠಶಾಲಾ’ ಚಿತ್ರವು ನ.14ರಂದು ತೆರೆಗೆ ಬರಲಿದೆ. ಹೆದ್ದೂರು ಮಂಜುನಾಥ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ಅಕ್ಷಯ್, ದಿಗಂತ್, ಮಿಥುನ್, ಆಯುಷ್, ಶ್ರೀಯಾನ್, ಅಹನ, ಗೌತಮಿ ನಟಿಸಿದ್ದಾರೆ.
ಸಿನಿವಾರ್ತೆ
ಪರಿಸರ ಮಹತ್ವ ಸಾರುವ ‘ಪಾಠಶಾಲಾ’ ಚಿತ್ರವು ನ.14ರಂದು ತೆರೆಗೆ ಬರಲಿದೆ. ಹೆದ್ದೂರು ಮಂಜುನಾಥ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ಅಕ್ಷಯ್, ದಿಗಂತ್, ಮಿಥುನ್, ಆಯುಷ್, ಶ್ರೀಯಾನ್, ಅಹನ, ಗೌತಮಿ ನಟಿಸಿದ್ದಾರೆ.
ಹೆದ್ದೂರು ಮಂಜುನಾಥ ಶೆಟ್ಟಿ, ‘ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ದೊಡ್ಡ ಅಂತರ ಇರೋದು ಯಾಕೆ ಎನ್ನುವ ವಿಷಯದ ಜೊತೆಗೆ ಅರಣ್ಯ ಭೂಮಿ ಒತ್ತುವರಿ ವಿಚಾರಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದರು. ನಿರ್ಮಾಪಕರಾದ ಪ್ರದೀಪ್ ಗುಡ್ಡೇಮನೆ, ಅರುಣ್ ಮಲ್ಲೇಸರ, ಭಾಸ್ಕರ್ ಕಮ್ಮರಡಿ, ರವಿ ಶೆಟ್ಟಿ ಇದ್ದರು.