ಸಾರಾಂಶ
ರಾಮದುರ್ಗ : ‘ಇಂದಿನ ಸರ್ಕಾರಗಳು ಕೊಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಜನ ಸೋಮಾರಿಯಾಗ್ತಿದ್ದಾರೆ. ಸರ್ಕಾರಗಳು ಕೊಡುತ್ತಿರುವ ಇಂತಹ ಬಿಟ್ಟಿ ಭಾಗ್ಯ ಯೋಜನೆಗಳಿಂದ ಜನರ ಬದುಕು ಉಜ್ವಲಗೊಳ್ಳುವುದಿಲ್ಲ’ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಮಹಾಸ್ವಾಮಿಗಳು ಪ್ರತಿಪಾದಿಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿಯಲ್ಲಿ ಸೋಮವಾರ ಕಲ್ಮೇಶ್ವರ ಸ್ವಾಮಿಗಳ ಷಷ್ಠಿಪೂರ್ತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಶ್ರೀಗಳು, ಇಂದಿನ ಸರ್ಕಾರಗಳು ಕೊಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಜನ ಸೋಮಾರಿಯಾಗ್ತಿದ್ದಾರೆ. ಇಂತಹ ಬಿಟ್ಟಿ ಭಾಗ್ಯ ಯೋಜನೆಗಳಿಂದ ಜನರ ಬದುಕು ಉಜ್ವಲಗೊಳ್ಳುವುದಿಲ್ಲ. ಜನರಲ್ಲಿ ದುಡಿಯುವ ಮನೋಭಾವ ಕಡಿಮೆಯಾಗಿ, ಸೋಮಾರಿತನ ಹೆಚ್ಚುತ್ತದೆ ಎಂದು ವಿಷಾದಿಸಿದರು.
ದೇಶದಲ್ಲಿ ರೈತ ಹಾಗೂ ಯೋಧ, ಎರಡು ಕಣ್ಣುಗಳಿದ್ದಂತೆ. ಯೋಧ ದೇಶ ಕಾಯುವ ಮೂಲಕ ನಮ್ಮನ್ನು ರಕ್ಷಣೆ ಮಾಡಿದರೆ, ರೈತರು ಕಷ್ಟಪಟ್ಟು ದುಡಿಯುವ ಮೂಲಕ ನಮಗೆ ಅನ್ನ ನೀಡುತ್ತಾರೆ. ರೈತರು ಕಷ್ಟಪಟ್ಟು ದುಡಿದರೆ ಭೂಮಿತಾಯಿ ಎಂದಿಗೂ ಅವರ ಕೈಬಿಡುವುದಿಲ್ಲ ಎಂದು ಹೇಳಿದರು.
ಶ್ರೀಗಳು ಹೇಳಿದ್ದೇನು?
- ಪುಕ್ಕಟೆ ಸ್ಕೀಂನಿಂದ ಜನರಲ್ಲಿ ದುಡಿವ ಮನೋಭಾವ ಕ್ಷೀಣ
- ಜನರಲ್ಲಿ ಸೋಮಾರಿತನ ಹೆಚ್ಚಳವು ಬೇಸರದ ವಿಷಯ- ದೇಶದಲ್ಲಿ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ
- ಯೋಧ ದೇಶ ಕಾಯ್ದರೆ, ರೈತರು ನಮಗೆ ಅನ್ನ ನೀಡ್ತಾನೆ
- ಕಷ್ಟಪಟ್ಟು ದುಡಿದರೆ ಭೂತಾಯಿ ನಮ್ಮನ್ನೆಂದೂ ಕೈಬಿಡಲ್ಲ
- ಬೆಳಗಾವಿ ಜಿಲ್ಲೆಯಲ್ಲಿ ಬಾಳೆಹೊನ್ನೂರು ಶ್ರೀಗಳ ನುಡಿ