2.5 ವರ್ಷದಲ್ಲೇ ರಾಜ್ಯದ 2422 ರೈತರು ಆತ್ಮ*ತ್ಯೆ - ಈ ಪೈಕಿ 2067 ರೈತ ಕುಟುಂಬಕ್ಕೆ ಪರಿಹಾರ

| N/A | Published : Sep 06 2025, 01:00 AM IST / Updated: Sep 06 2025, 04:53 AM IST

2.5 ವರ್ಷದಲ್ಲೇ ರಾಜ್ಯದ 2422 ರೈತರು ಆತ್ಮ*ತ್ಯೆ - ಈ ಪೈಕಿ 2067 ರೈತ ಕುಟುಂಬಕ್ಕೆ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 10 ಸಾವಿರ ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೆ, ಕಳೆದ ಎರಡೂವರೆ ವರ್ಷದಲ್ಲೇ 2,422 ರೈತರು ಸಾವಿಗೆ ಶರಣಾಗಿದ್ದಾರೆ!

ಗಿರೀಶ್‌ ಗರಗ

  ಬೆಂಗಳೂರು :  ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ 10 ಸಾವಿರ ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೆ, ಕಳೆದ ಎರಡೂವರೆ ವರ್ಷದಲ್ಲೇ 2,422 ರೈತರು ಸಾವಿಗೆ ಶರಣಾಗಿದ್ದಾರೆ!

ಹೀಗಂತ ಕಂದಾಯ ಇಲಾಖೆಯ ಜುಲೈ ಮಾಸದವರೆಗಿನ ರೈತರ ಆತ್ಮ*ತ್ಯೆ ಸಂಬಂಧಿ ಅಂಕಿ-ಅಂಶಗಳೇ ಹೇಳುತ್ತಿವೆ. ರಾಜ್ಯದಲ್ಲಿ ದಶಕದ ಹಿಂದೆ ರೈತರ ಆತ್ಮ*ತ್ಯೆ ಪ್ರಮಾಣ ವಿಪರೀತವಿದ್ದು, ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂಬ ಭಾವನೆಯನ್ನೇ ಇವು ಸುಳ್ಳಾಗಿಸಿವೆ.

ಅಂಕಿ-ಅಂಶದ ಪ್ರಕಾರ, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ವಾರ್ಷಿಕ ಸರಾಸರಿ 1 ಸಾವಿರದಂತೆ 10,371 ರೈತರು ಆತ್ಮ*ತ್ಯೆ  ಮಾಡಿಕೊಂಡಿದ್ದಾರೆ. ಅಲ್ಲದೆ, 2023-24ರಿಂದ 2025-26ನೇ ಸಾಲಿನವರೆಗೆ 2,422 ರೈತರು ಆತ್ಮ*ತ್ಯೆಗೆ ಶರಣಾಗಿದ್ದಾರೆ.

ಪ್ರವಾಹ, ಬರ ಮತ್ತಿತರ ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕೆ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಸಾವಿನ ದಾರಿ ಹಿಡಿಯುವಂತಾಗಿದೆ. ಅದರಲ್ಲೂ ಬೆಳೆದ ಬೆಳೆ ಕೈ ಸೇರದೆ ಸಾಲ ಬಾಧೆ ತಾಳಲಾರದೆ ಆತ್ಮ*ತ್ಯೆ  ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತಲಿದೆ. 2015-16ರಿಂದ 2024-25ನೇ ಸಾಲಿನವರೆಗೆ 10,371 ರೈತರು ಸಾವಿಗೆ ಶರಣಾಗಿದ್ದಾರೆ. ಅದೇ 2023-24ರಿಂದ 2025-26ರ ಜುಲೈವರೆಗೆ ಒಟ್ಟು 2,422 ರೈತರು ಆತ್ಮ*ತ್ಯೆ  ಮಾಡಿಕೊಂಡಿರುವ ವರದಿಯಾಗಿದೆ. ಅದರಲ್ಲಿ 2,067 ರೈತರು ಸಾಲಬಾಧೆ ಸೇರಿ ಇನ್ನಿತರ ಕಾರಣಗಳಿಂದಾಗಿ ಬದುಕಿಗೆ ಅಂತ್ಯಹಾಡಿದ್ದಾರೆ.

ಹಾವೇರಿಯಲ್ಲಿ ಅತಿಹೆಚ್ಚು ಆತ್ಮ*ತ್ಯೆ: 

ಸರ್ಕಾರದ ದಾಖಲೆಯಂತೆ ಹಾವೇರಿ ಜಿಲ್ಲೆಯಲ್ಲಿ ಅತಿಹೆಚ್ಚು ರೈತರು ಆತ್ಮ*ತ್ಯೆ ಗೆ ಶರಣಾಗಿದ್ದಾರೆ. ದಾಖಲೆಗಳ ಪ್ರಕಾರ 2023-24ರಿಂದ ಈವರೆಗೆ 260 ರೈತರು ಜೀವ ಕಳೆದುಕೊಂಡಿದ್ದರೆ, ಅದರಲ್ಲಿ ಸಾಲಬಾಧೆ ಸೇರಿ ಸರ್ಕಾರದಿಂದ ಪರಿಹಾರ ನೀಡಬಹುದಾದ ಕಾರಣಗಳಿಗೆ 228 ರೈತರು ಸಾವಿಗೀಡಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಬೆಳಗಾವಿಯಿದ್ದು, ಒಟ್ಟು 218 ರೈತರು ಆತ್ಮ*ತ್ಯೆಗೆ ಶರಣಾಗಿದ್ದು, ಅದರಲ್ಲಿ 184 ರೈತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ.

ಕೋಲಾರದಲ್ಲಿ ಒಬ್ಬ ರೈತ ಸಾವು:

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೇ ಹೆಚ್ಚಿನ ರೈತ ಆತ್ಮ*ತ್ಯೆಗಳು ಉಂಟಾಗಿವೆ. ಉಳಿದಂತೆ ದಕ್ಷಿಣ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ರೈತರ ಆತ್ಮ*ತ್ಯೆ ಪ್ರಕರಣ ಕಡಿಮೆಯಿದೆ. ಅದರಲ್ಲೂ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಕೇವಲ ಒಬ್ಬ ರೈತರ ಮಾತ್ರ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 4, ಚಾಮರಾಜನಗರದಲ್ಲಿ 6, ರಾಮನಗರ (ಬೆಂಗಳೂರು ದಕ್ಷಿಣ) 10, ದಕ್ಷಿಣ ಕನ್ನಡ 11, ಕೊಡಗು 12 ರೈತರು ಸಾವಿಗೆ ಶರಣಾಗಿದ್ದಾರೆ.

98 ಕೋಟಿ ರು. ಪರಿಹಾರ:

ಆತ್ಮ*ತ್ಯೆಗೆ ಶರಣಾಗುವ ಎಲ್ಲ ರೈತರ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡುವುದಿಲ್ಲ. ಸಾಲಬಾಧೆಯಂತಹ ಆರ್ಥಿಕ ಸಂಕಷ್ಟದಿಂದ ಆತ್ಮ*ತ್ಯೆ ಮಾಡಿಕೊಂಡರೆ ಮಾತ್ರ ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ. ಅದರಂತೆ 2023-24ರಿಂದ 2025-26ರವರೆಗೆ ಆತ್ಮ*ತ್ಯೆ  ಮಾಡಿಕೊಂಡ 2,422 ರೈತರ ಪೈಕಿ 2,067 ರೈತರ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಒಟ್ಟಾರೆ ಅಷ್ಟು ಪ್ರಮಾಣದ ರೈತ ಕುಟುಂಬಗಳಿಗೆ ತಲಾ 5 ಲಕ್ಷ ರು.ನಂತೆ 98.10 ಕೋಟಿ ರು. ಪರಿಹಾರ ವಿತರಿಸಲಾಗಿದೆ.

ವರ್ಷದಲ್ಲಿ ಸರಾಸರಿ 1 ಸಾವಿರ ಆತ್ಮ*ತ್ಯೆ

ಕಳೆದ 10 ವರ್ಷಗಳಲ್ಲಿ ರೈತರಆತ್ಮ*ತ್ಯೆ ಪ್ರಕರಣಗಳು ತಗ್ಗಿಲ್ಲ. 2015-16ರಿಂದ 2024-25ರವರೆಗೆ ಒಟ್ಟಾರೆ 10,371 ರೈತರು ಆತ್ಮ*ತ್ಯೆಗೆ ಶರಣಾಗಿದ್ದಾರೆ. ಈ ವರ್ಷದ ಅಂಕಿ-ಅಂಶವೂ ಸೇರಿಸಿದರೆ ರೈತರ ಆತ್ಮ*ತ್ಯೆ ಸಂಖ್ಯೆ 10,461ಕ್ಕೆ ಏರಿಕೆಯಾಗುತ್ತದೆ. ಅಲ್ಲದೆ, ಹೀಗೆ ಆತ್ಮ*ತ್ಯೆ ಮಾಡಿಕೊಂಡ ರೈತರಲ್ಲಿ 9,141 ಅರ್ಹ ಪ್ರಕರಣ ಎಂದು ಕೃಷಿ ಇಲಾಖೆ ಪರಿಗಣಿಸಿ, ಪರಿಹಾರ ನೀಡಲಾಗಿದೆ. 

2023-24ರಿಂದ 2025-26ರವರೆಗಿನ ಆತ್ಮ*ತ್ಯೆ  ಪ್ರಕರಣಗಳು:

ವರ್ಷವರದಿಯಾದ ಪ್ರಕರಣಪರಿಹಾರಕ್ಕೆ ಅರ್ಹ ಪ್ರಕರಣ ಪರಿಹಾರದ ಮೊತ್ತ

2023-24  1250  1082  54.10 ಕೋಟಿ ರು.

2024-25  108  2920  40.75 ಕೋಟಿ ರು.

2025-26  906  53.25 ಕೋಟಿ ರು.

ಒಟ್ಟು2,42 22,06798.10 ಕೋಟಿ ರು.

10 ವರ್ಷಗಳಲ್ಲಿನ ರೈತರಆತ್ಮ*ತ್ಯೆ  ವಿವರ:

ವರ್ಷವರದಿಯಾದ ಪ್ರಕರಣ ಪರಿಹಾರಕ್ಕೆ ಅರ್ಹ ಪ್ರಕರಣ

2015-16 1525  1062

2016-17  1203  932

2017-18  1323  1052

2018-19  1084  866

2019-20  1091  895

2020-21  851  716

2021-22  859  702

2022-23  968  849

2023-24  1250  1082

2024-25  1082  920

2025-26  90 60

ಒಟ್ಟು10 46 19141

Read more Articles on