ಸಾರಾಂಶ
ಮಾ.6ರೊಳಗೆ ವಹಿವಾಟು ಬಹಿರಂಗ ಆಗದ್ದು ನ್ಯಾಯಾಂಗ ನಿಂದನೆ ಎಂದು ಎಸ್ಬಿಐ ವಿರುದ್ಧ ಎಡಿಆರ್ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಮೂಲಕ ದೂರು ದಾಖಲಿಸಿದೆ.
ನವದೆಹಲಿ: ಮಾ.6ರೊಳಗೆ ಚುನಾವಣಾ ಬಾಂಡ್ ಮೂಲಕ ನಡೆದ ವಹಿವಾಟುಗಳನ್ನು ಬಹಿರಂಗ ಮಾಡಬೇಕು ಎಂಬ ಕೋರ್ಟ್ ಆದೇಶವನ್ನು ಉಲ್ಲಂಘಿಸಿಭಾರತೀಯ ಸ್ಟೇಟ್ ಬ್ಯಾಂಕ್ ನ್ಯಾಯಾಂಗ ನಿಂದನೆ ಮಾಡಿದೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಒಕ್ಕೂಟ (ಎಡಿಆರ್) ಎನ್ಜಿಒ, ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದೆ.ಈ ಬಗ್ಗೆ ಹೇಳಿಕೆ ನೀಡಿರುವ ಭೂಷಣ್, ಎಸ್ಬಿಐನವರು ಚುನಾವಣಾ ಬಾಂಡ್ ಕುರಿತ ಮಾಹಿತಿ ಬಹಿರಂಗಗೊಳಿಸಲು ಜೂ.30ರವರೆಗೆ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಮಾ.11ರಂದು ನಡೆಯಲಿದ್ದು, ಅದರೊಂದಿಗೆ ಈ ಅರ್ಜಿ ವಿಚಾರಣೆಯೂ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಇತ್ತೀಚೆಗೆ ಚುನಾವಣಾ ಬಾಂಡ್ಗಳನ್ನು ಸುಪ್ರೀಂ ಕೋರ್ಟ್ ನಿರ್ಬಂಧಿಸಿ, ಈ ಬಾಂಡ್ ಖರೀದಿಸಿದವರ ಹೆಸರನ್ನು ಮಾ.6ರೊಳಗೆ ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಎಸ್ಬಿಐಗೆ ಆದೇಶಿಸಿತ್ತು. ಆದರೆ ಇದು ಕಷ್ಟದ ಕೆಲಸ ಎಂದಿದ್ದ ಎಸ್ಬಿಐ ಜೂ.30ರ ಗಡುವು ಕೇಳಿತ್ತು.