ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವಕ್ಫ್‌ ವಿವಾದ ಭುಗಿಲೆದ್ದಿರುವ ನಡುವೆಯೇ, ವಕ್ಫ್‌ ಕಾಯ್ದೆ ತಿದ್ದುಪಡಿಗೆ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿ ಮುಂದೆ ಕರ್ನಾಟಕದ ಅಧಿಕಾರಿಗಳ ತಂಡ ಗುರುವಾರ ಹಾಜರಾಗಲಿದೆ.

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವಕ್ಫ್‌ ವಿವಾದ ಭುಗಿಲೆದ್ದಿರುವ ನಡುವೆಯೇ, ವಕ್ಫ್‌ ಕಾಯ್ದೆ ತಿದ್ದುಪಡಿಗೆ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿ ಮುಂದೆ ಕರ್ನಾಟಕದ ಅಧಿಕಾರಿಗಳ ತಂಡ ಗುರುವಾರ ಹಾಜರಾಗಲಿದೆ.

ರಾಜ್ಯಗಳಲ್ಲಿ ವಕ್ಫ್‌ ಗದ್ದಲ, ಸಾಚಾರ್‌ ಆಯೋಗದ ವರದಿಯಲ್ಲಿ ಪ್ರಸ್ತಾಪಿತವಾಗಿದ್ದ ಸರ್ಕಾರದಿಂದ ವಕ್ಫ್‌ ಆಸ್ತಿ ಕಬಳಿಕೆ ಮೊದಲಾದ ವಿಷಯಗಳ ಕುರಿತು ಮಾಹಿತ ಹಂಚಿಕೊಳ್ಳುವಂತೆ ಜಗದಾಂಬಿಕಾ ಪಾಲ್‌ ಅಧ್ಯಕ್ಷತೆಯ ಜೆಪಿಸಿ, ವಿವಿಧ ರಾಜ್ಯಗಳಿಗೆ ಸೂಚಿಸಿತ್ತು. ಅದರ ಭಾಗವಾಗಿ ಗುರುವಾರದಿಂದ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೆಶ, ಒಡಿಶಾ ಮತ್ತು ದೆಹಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಭಾಗಿಯಾಗಿ ತಮ್ಮ ಮಾಹಿತಿ ಹಂಚಿಕೊಳ್ಳಲಿದ್ದಾರೆ.