ಸಾರಾಂಶ
ಖಲಿಸ್ತಾನಿಗಳ ವಿಚಾರದಲ್ಲಿ ಭಾರತದ ವಿರುದ್ಧ ರಾಜತಾಂತ್ರಿಕ ಸಮರಕ್ಕೆ ಇಳಿದಿದ್ದ ಕೆನಡಾ ಇದೇ ಮೊದಲ ಬಾರಿಗೆ ತನ್ನ ನೆಲದಲ್ಲಿ ಖಲಿಸ್ತಾನಿಗಳು ಭಾರತವನ್ನು ಗುರಿಯಾಗಿಸಿಕೊಂಡು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದೆ.
ಒಟ್ಟಾವಾ: ಖಲಿಸ್ತಾನಿಗಳ ವಿಚಾರದಲ್ಲಿ ಭಾರತದ ವಿರುದ್ಧ ರಾಜತಾಂತ್ರಿಕ ಸಮರಕ್ಕೆ ಇಳಿದಿದ್ದ ಕೆನಡಾ ಇದೇ ಮೊದಲ ಬಾರಿಗೆ ತನ್ನ ನೆಲದಲ್ಲಿ ಖಲಿಸ್ತಾನಿಗಳು ಭಾರತವನ್ನು ಗುರಿಯಾಗಿಸಿಕೊಂಡು ಷಡ್ಯಂತ್ರವನ್ನು ರೂಪಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದೆ. ಕೆನಡಾದ ಕೆನಡಿಯನ್ ಸೆಕ್ಯೂರಿಟಿ ಇಂಟಲಿಜೆನ್ಸ್ ಸರ್ವೀಸ್ ( ಸಿಎಸ್ಐಎಸ್) ಭಾರತದ ವಿರುದ್ಧ ಖಲಿಸ್ತಾನಿಗಳ ಕುತಂತ್ರವನ್ನು ಕೊನೆಗೂ ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ.
ಏಜೆನ್ಸಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಕೆನಡಾದೊಳಗೆ ವಿದೇಶಿ ಹಸ್ತಕ್ಷೇಪ, ಉಗ್ರಗಾಮಿ ಚಟುವಟಿಕೆಯ ಬಗ್ಗೆ ಕಳವಳಕಾರಿ ಅಂಶಗಳು ಬಯಲು ಮಾಡಿದ್ದು, ‘ ಖಲಿಸ್ತಾನಿ ಉಗ್ರಗಾಮಿಗಳು ಭಾರತದಲ್ಲಿ ಹಿಂಸಾಚಾರ ಬಿತ್ತರಿಸಲು, ನಿಧಿ ಸಂಗ್ರಹಣೆಯಂತಹ ಯೋಜನೆಗಳಿಗೆ ಕೆನಡಾವನ್ನುನೆಲೆಯಾಗಿ ಬಳಸುತ್ತಿದೆ’ ಎಂದಿದೆ. ಈ ಮೂಲಕ ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ಸುರಕ್ಷಿತ ತಾಣ ಎನ್ನುವುದು ಬಹಿರಂಗವಾಗಿದೆ.. ಇನ್ನು ಕೆನಡಾ ಖಲಿಸ್ತಾನಿಗಳ ವಿರುದ್ಧ ಉಗ್ರವಾದ ಎಂಬ ಪದವನ್ನು ಅಧಿಕೃತವಾಗಿ ಬಳಸಿದ್ದು, ಇದೇ ಮೊದಲು.