ರಾಮಮಂದಿರ ನಿರ್ಮಾಣಕ್ಕೆ ಕೆನಡಾ ಕನ್ನಡಿಗ ಸಂಸದ ಆರ್ಯ ಹರ್ಷ

| Published : Feb 01 2024, 02:02 AM IST

ರಾಮಮಂದಿರ ನಿರ್ಮಾಣಕ್ಕೆ ಕೆನಡಾ ಕನ್ನಡಿಗ ಸಂಸದ ಆರ್ಯ ಹರ್ಷ
Share this Article
  • FB
  • TW
  • Linkdin
  • Email

ಸಾರಾಂಶ

140 ಕೋಟಿ ಹಿಂದುಗಳಿಗೆ ಮಂದಿರದಿಂದ ಹೊಸಯುಗ ಆರಂಭವಾಗಿದೆ. ಮಂದಿರ ಉದ್ಘಾಟನೆಯ ಭಾವನಾತ್ಮಕ ಕ್ಷಣವನ್ನು ಲೈವ್‌ನಲ್ಲಿ ವೀಕ್ಷಿಸಿದ್ದೇನೆ ಎಂದು ಕೆನಡಾದ ಕನ್ನಡಿಗ ಸಂಸದ ಆರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಾವಾ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಮತ್ತು ಉದ್ಘಾಟನೆಯು ಕೆನಡಾದ 10 ಲಕ್ಷ ಹಿಂದೂಗಳು ಸೇರಿದಂತೆ ಪ್ರಪಂಚದ 140 ಕೋಟಿ ಹಿಂದೂಗಳಿಗೆ ಹೊಸ ಯುಗದ ಪ್ರಾರಂಭ ಎಂದು ಕೆನಡಾ ಸಂಸದ, ತುಮಕೂರು ಮೂಲದ ಆರ್ಯ ಚಂದ್ರ ಬಣ್ಣಿಸಿದ್ದಾರೆ.

ಕೆನಡಾ ಸಂಸತ್ತಿನಲ್ಲಿ ರಾಮ ಮಂದಿರ ಉದ್ಘಾಟನೆ ಕುರಿತು ಮಾತನಾಡಿದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷದ ಸಂಸದ ಆರ್ಯ, ‘ಹಿಂದೂ ಧರ್ಮದ ಜನ್ಮಸ್ಥಾನವಾಗಿರುವ ಭಾರತವು ತನ್ನ ನಾಗರಿಕತೆಯನ್ನು ಪ್ರಮುಖ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಪುನರ್‌ನಿರ್ಮಾಣ ಮಾಡುತ್ತಿದೆ. ಜ.22ರಂದು ಮಂದಿರ ಉದ್ಘಾಟನೆಯ ಭಾವನಾತ್ಮಕ ಕ್ಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದ್ದೇನೆ’ ಎಂದು ಹೇಳಿದರು.ಅಲ್ಲದೇ ‘ಶತಮಾನಗಳ ನಿರೀಕ್ಷೆ ಮತ್ತು ಅಪಾರ ತ್ಯಾಗದ ನಂತರ ಅಯೋಧ್ಯೆ ದೇವಾಲಯವನ್ನು ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠೆಯೊಂದಿಗೆ ಉದ್ಘಾಟಿಸಲಾಯಿತು. ಇದು ವಿಗ್ರಹವನ್ನು ದೇವರನ್ನಾಗಿ ಪರಿವರ್ತಿಸಿದೆ’ ಎಂದರು.