ಗುಟ್ಕಾ ಜಾಹೀರಾತು ಕೇಸ್‌:ಶಾರುಖ್ ಖಾನ್‌, ಅಕ್ಷಯ್‌,ಅಜಯ್‌ಗೆ ನೋಟಿಸ್‌ ಜಾರಿ

| Published : Dec 11 2023, 01:15 AM IST

ಗುಟ್ಕಾ ಜಾಹೀರಾತು ಕೇಸ್‌:ಶಾರುಖ್ ಖಾನ್‌, ಅಕ್ಷಯ್‌,ಅಜಯ್‌ಗೆ ನೋಟಿಸ್‌ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಟ್ಕಾ ಕಂಪನಿಗಳ ಪ್ರಚಾರ ರಾಯಭಾರಿಗಳಾಗಿರುವ ನಟರಾದ ಶಾರುಖ್‌ ಖಾನ್‌, ಅಕ್ಷಯ್‌ ಕುಮಾರ್‌ ಮತ್ತು ಅಜಯ್‌ ದೇವಗನ್‌ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಅಲಹಾಬಾದ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಲಖನೌ: ಗುಟ್ಕಾ ಕಂಪನಿಗಳ ಪ್ರಚಾರ ರಾಯಭಾರಿಗಳಾಗಿರುವ ನಟರಾದ ಶಾರುಖ್‌ ಖಾನ್‌, ಅಕ್ಷಯ್‌ ಕುಮಾರ್‌ ಮತ್ತು ಅಜಯ್‌ ದೇವಗನ್‌ ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಅಲಹಾಬಾದ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಮೂವರೂ ನಟರು ಪದ್ಮ ಪ್ರಶಸ್ತಿ ಪುರಸ್ಕೃತರಾಗಿದ್ದು, ಅಂಥವರು ಗುಟ್ಕಾ ಪರ ಪ್ರಚಾರ ಮಾಡುವುದು ಸರಿಯಲ್ಲ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರ, ಈ ಸಂಬಂಧ ಮೂವರು ನಟರಿಗೂ ನೋಟಿಸ್‌ ನೀಡಲಾಗಿದೆ. ಜೊತೆಗೆ ಇದೇ ರೀತಿಯ ಪ್ರಕರಣ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಕಾರಣ ಈ ಅರ್ಜಿ ವಜಾ ಮಾಡಬೇಕು ಎಂದು ಕೋರಿತು. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಮೇ 9, 2024 ಕ್ಕೆ ಮುಂದೂಡಿತು.