ದಿಲ್ಲಿಯಲ್ಲಿ ಒಂದೇ ದಿನ ಬಿರು ಬಿಸಿಲಿಗೆ 22 ಮಂದಿ ಬಲಿ!

| Published : Jun 21 2024, 01:01 AM IST / Updated: Jun 21 2024, 05:12 AM IST

ಸಾರಾಂಶ

ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಮಾರುತ ತನ್ನ ಆರ್ಭಟ ಮುಂದುವರಿಸಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 22 ಜನರು ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ.

ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಉಷ್ಣ ಮಾರುತ ತನ್ನ ಆರ್ಭಟ ಮುಂದುವರಿಸಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 22 ಜನರು ಉಷ್ಣ ಸಂಬಂಧಿ ವ್ಯಾಧಿಗಳಿಂದ ಸಾವನ್ನಪ್ಪಿದ್ದಾರೆ.

ಇದರೊಂದಿಗೆ 2 ದಿನದಲ್ಲಿ 42 ಜನರು ದಿಲ್ಲಿಯಲ್ಲಿ ತಾಪಕ್ಕೆ ಬಲಿಯಾದಂತಾಗಿದೆ. ಬುಧವಾರ ಒಂದೇ ದಿನ 20 ಮಂದಿ ಸಾವನ್ನಪ್ಪಿದ್ದರು.

ಬಿಸಿಲ ಬೇಗೆ ಕಾರಣ ರಾಷ್ಟ್ರ ರಾಜಧಾನಿಯ ಪ್ರಮುಖ 3 ಆಸ್ಪತ್ರೆಗಳಲ್ಲಿ ಒಂದೇ ದಿನ 72 ಮಂದಿ ದಾಖಲಾಗಿದ್ದರು. ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ 33 ಜನರು ಉಷ್ಣ ಸಂಬಂಧಿತ ಅನಾರೋಗ್ಯದಿಂದ ದಾಖಲಾಗಿದ್ದು, ಇವರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ 22 ಜನರಲ್ಲಿ 4 ಜನರು ಮೃತಪಟ್ಟಿದ್ದಾರೆ. ಜೊತೆಗೆ ದೆಹಲಿ ಸರ್ಕಾರದ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ 5 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 ವಾರದಲ್ಲಿ 192 ಬಲಿ:

ಈ ನಡುವೆ, ದಿಲ್ಲಿಯಲ್ಲಿ ಜೂ.11 ರಿಂದ 19ರ ವರೆಗೆ ಒಟ್ಟು 192 ಮಂದಿ ನಿರ್ವಸಿತರು ಬಿಸಿ ಗಾಳಿ ತಾಳದೇ ಮೃತಪಟ್ಟಿದ್ದಾರೆ ಎಂದು ಸ್ವಯಂಸೇವಾ ಸಂಸ್ಥೆಯ ವರದಿ ಹೇಳಿದೆ.