ಜಾಮೀನು ಬೆನ್ನಲ್ಲೇ ಕೇಜ್ರಿವಾಲ್‌ಗೆ 2 ಹೊಸ ಇ.ಡಿ. ಸಮನ್ಸ್‌

| Published : Mar 18 2024, 01:46 AM IST

ಜಾಮೀನು ಬೆನ್ನಲ್ಲೇ ಕೇಜ್ರಿವಾಲ್‌ಗೆ 2 ಹೊಸ ಇ.ಡಿ. ಸಮನ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ದಿಲ್ಲಿ ಅಬಕಾರಿ ಹಗರಣದ 8 ಸಮನ್ಸ್‌ಗಳಿಗೆ ಗೈರಾದ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಿಲ್ಲಿ ಜಲಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ 2 ಹೊಸ ಸಮನ್ಸ್‌ ಜಾರಿ ಮಾಡಿದೆ.

ಪಿಟಿಐ ನವದೆಹಲಿ

ದಿಲ್ಲಿ ಅಬಕಾರಿ ಹಗರಣದ 8 ಸಮನ್ಸ್‌ಗಳಿಗೆ ಗೈರಾದ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಿಲ್ಲಿ ಜಲಮಂಡಳಿ ಹಗರಣಕ್ಕೆ ಸಂಬಂಧಿಸಿದಂತೆ 2 ಹೊಸ ಸಮನ್ಸ್‌ ಜಾರಿ ಮಾಡಿದೆ.

ಈ ವಿಷಯವನ್ನು ಆಪ್‌ ನಾಯಕಿ ಹಾಗೂ ದಿಲ್ಲಿ ಸಚಿವೆ ಅತಿಷಿ ಬಹಿರಂಗಪಡಿಸಿದ್ದು, ಇದು ಯಾವ ಪ್ರಕರಣ ಎಂದೇ ಗೊತ್ತಿಲ್ಲ. ಒಟ್ಟಿನಲ್ಲಿ ಕೇಜ್ರಿವಾಲ್‌ ಅವರನ್ನು ಬಂಧಿಸುವ ಉದ್ದೇಶ ಮಾತ್ರ ಇ.ಡಿ.ಗೆ ಇದೆ. ಅದಕ್ಕೆಂದೇ ಸಮನ್ಸ್‌ ಜಾರಿ ಮಾಡಲಾಗಿದೆ ಎಂದು ದೂರಿದ್ದಾರೆ. ಆದರೆ ಈ ಸಮನ್ಸ್‌ ಬಗ್ಗೆ ಇ.ಡಿ. ಆಗಲಿ ಅಥವಾ ಸಿಬಿಐ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಏನಿದು ಜಲಮಂಡಳಿ ಹಗರಣ

ದೆಹಲಿಯ ಜಲಮಂಡಳಿಯು, ಕೆಲ ಉಪಕರಣ ಅಳವಡಿಕೆ ಗುತ್ತಿಗೆಯನ್ನು ಎನ್‌ಕೆಜಿ ಎಂಬ ಕಂಪನಿಗೆ ವಹಿಸಿತ್ತು. ಈ ಕಂಪನಿಗೆ ಗುತ್ತಿಗೆ ಸಿಗುವ ರೀತಿಯಲ್ಲೇ ನಿಯಮ ರೂಪಿಸಲಾಗಿತ್ತು. ಜೊತೆಗೆ ಗುತ್ತಿಗೆದಾರರಿಂದ ಭಾರೀ ಪ್ರಮಾಣದಲ್ಲಿ ಲಂಚ ಸ್ವೀಕರಿಸುವ ಸಲುವಾಗಿ ಗುತ್ತಿಗೆ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ್ದ ಜಲಮಂಡಳಿ ಎಂಜಿನಿಯರ್‌ ಜಗದೀಶ್‌ ಕುಮಾರ್‌, ಈ ಹಣವನ್ನು ಆಪ್‌ಆದ್ಮಿಕ್ಕೆ ನೀಡಿದ್ದಾರೆ. ಈ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂದು 2022ರಲ್ಲಿ ಸಿಬಿಐ ಕೇಸು ದಾಖಲಿಸಿತ್ತು. ಅದರ ಆಧಾರದಲ್ಲಿ ಇ.ಡಿ. ಕೂಡಾ ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿ ತನಿಖೆ ಕೈಗೊಂಡಿದೆ.