ಅಬಕಾರಿ ಹಗರಣ: ಬಂಧಿತ ನಾಯಕಿ ಕವಿತಾ ತಿಹಾರ ಜೈಲಿಗೆ ಶಿಫ್ಟ್‌

| Published : Mar 27 2024, 01:04 AM IST / Updated: Mar 27 2024, 09:05 AM IST

ಅಬಕಾರಿ ಹಗರಣ: ಬಂಧಿತ ನಾಯಕಿ ಕವಿತಾ ತಿಹಾರ ಜೈಲಿಗೆ ಶಿಫ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ಅಬಕಾರಿ ಹಗರಣದಲ್ಲಿ ಆಪ್‌ ಪಕ್ಷಕ್ಕೆ ಕಿಕ್‌ ಬ್ಯಾಕ್‌ ಕೊಟ್ಟ ಆರೋಪ ಎದುರಿಸುತ್ತಿರುವ ಬಿಆರ್‌ಎಸ್‌ ನಾಯಕಿ ಕವಿತಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ನ್ಯಾಯಾಲಯ ಆದೇಶಿಸಿದೆ.

ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಆಪ್‌ ಪಕ್ಷಕ್ಕೆ ಕಿಕ್‌ ಬ್ಯಾಕ್‌ ಕೊಟ್ಟ ಆರೋಪ ಎದುರಿಸುತ್ತಿರುವ ಬಿಆರ್‌ಎಸ್‌ ನಾಯಕಿ ಕವಿತಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ನ್ಯಾಯಾಲಯ ಆದೇಶಿಸಿದೆ. 

ಹೀಗಾಗಿ ಅಬ್ನ್ನು ತಿಹಾರ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಈ ನಡುವೆ ಕವಿತಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಏ.1ಕ್ಕೆ ನಿಗದಿ ಆಗಿದೆ.3 ದಿನಗಳ ಜಾರಿ ನಿರ್ದೇಶನಾಲಯದ ಬಂಧನದ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ಕವಿತಾ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. 

ಆದರೆ ನ್ಯಾ ಕಾವೇರಿ ಬವೇಜ ನೇತೃತ್ವದ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಮಾ.15ರಂದು ಬಂಧಿಸಿತ್ತು.