ರೈತನ ಸಾವಿಗೆ ಹರ್ಯಾಣ ಸಿಎಂ ಹೊಣೆ: ರೈತರ ಕಿಡಿ

| Published : Feb 23 2024, 01:50 AM IST / Updated: Feb 23 2024, 08:31 AM IST

ಸಾರಾಂಶ

ಸಿಎಂ ಖಟ್ಟರ್‌, ಗೃಹ ಸಚಿವ ವಿಜ್‌ ವಿರುದ್ಧ ಪ್ರಕರಣಕ್ಕೆ ರೈತರು ಆಗ್ರಹ ಮಾಡಿದ್ದು, ಮುಂದಿನ ವಾರ ಟ್ರಾಕ್ಟರ್‌ ಜಾಥಾ ಮಾಡಲು ರೈತರು ನಿರ್ಧರಿಸಿದ್ದಾರೆ. ಅಲ್ಲದೆ ಶುಕ್ರವಾರ ಬ್ಲಾಕ್‌ ಡೇ ಆಚರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಚಂಡೀಗಢ: ಪಂಜಾಬ್‌, ಹರ್ಯಾಣ ಗಡಿಯಲ್ಲಿ ಬುಧವಾರ ಪೊಲೀಸರ ದಾಳಿಯಲ್ಲಿ ರೈತ ಸಾವನ್ನಪ್ಪಿದ ಘಟನೆಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ ಖಟ್ಟರ್‌ ಮತ್ತು ಗೃಹ ಸಚಿವ ಅನಿಲ್‌ ವಿಜ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಗುರುವಾರ ಆಗ್ರಹಿಸಿದೆ. 

ರೈತರ ಸಾವಿಗೆ ಸಂಬಂಧಿಸಿದಂತೆ ಶುಕ್ರವಾರ ದೇಶಾದ್ಯಂತ ಕರಾಳದಿನ ಆಚರಿಸಲಾಗುತ್ತದೆ. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮನೋಹರ್‌ ಲಾಲ್‌ ಖಟ್ಟರ್‌ ಮತ್ತು ಅನಿಲ್‌ ವಿಜಿ ಅವರ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ ಎಂದು ಎಸ್‌ಕೆಎಂ ಹೇಳಿದೆ. 

26ರಂದು ಟ್ರಾಕ್ಟರ್‌ ರ್‍ಯಾಲಿ: ರೈತ ಪ್ರತಿಭಟನೆಯ ಭಾಗವಾಗಿ ಫೆ.26ರಂದು ಹೆದ್ದಾರಿಗಳಲ್ಲಿ ಟ್ರಾಕ್ಟರ್‌ ಜಾಥಾ ಕೈಗೊಳ್ಳಲಾಗುತ್ತದೆ ಹಾಗೂ ಮಾ.14ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಿಸಾನ್‌ ಮಜ್‌ದೂರ್‌ ಮಹಾಪಂಚಾಯತ್‌ ನಡೆಸಲಾಗುತ್ತದೆ ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. 

ಹರ್ಯಾಣ ಪೊಲೀಸರು ಮತ್ತು ಪಂಜಾಬ್‌ನ ರೈತರ ನಡುವೆ ನಡೆದ ಘರ್ಷಣೆಯಲ್ಲಿ ಸುಭಕರಣ್‌ ಸಿಂಗ್ ಎಂಬ ರೈತ ಬುಧವಾರ ಮೃತಪಟ್ಟಿದ್ದ. ಹೀಗಾಗಿ 2 ದಿನಗಳ ಕಾಲ ದೆಹಲಿ ಚಲೋಗೆ ತಡೆ ನೀಡಲಾಗಿತ್ತು. 

ರೈತರ ಮುಂದಿನ ನಡೆಯ ಬಗ್ಗೆ ಗುರುವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆಯನ್ನು ಕೈಗೊಂಡಿವೆ. 

ರೈತರ ನಿರ್ಣಯಗಳೇನು?

  • ಶುಕ್ರವಾರ ದೇಶಾದ್ಯಂತ ಕರಾಳದಿನ ಆಚರಣೆ
  • ಅಮಿತ್‌ ಶಾ, ಖಟ್ಟರ್‌, ವಿಜಿ ಪ್ರತಿಕೃತಿ ದಹನಫೆ.26ರಂದು ಹೆದ್ದಾರಿಗಳಲ್ಲಿ ಟ್ರಾಕ್ಟರ್‌ ಜಾಥಾ
  • ಮಾ.14ರಂದು ರಾಮಲೀಲಾ ಮೈದಾನದಲ್ಲಿ ಸಭೆ