ಸಾರಾಂಶ
ಕೇರಳದ ಕರಾವಳಿ ತೀರದಲ್ಲಿ ಸಿಂಗಾಪುರದ ಧ್ವಜವಿರುವ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಡಗಿನಲ್ಲಿದ್ದ 18 ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ.
ಕೊಚ್ಚಿ: ಕೇರಳದ ಕರಾವಳಿ ತೀರದಲ್ಲಿ ಸಿಂಗಾಪುರದ ಧ್ವಜವಿರುವ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಡಗಿನಲ್ಲಿದ್ದ 18 ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ.
ಜೂನ್ 7 ರಂದು ಶ್ರೀಲಂಕಾದ ಕೊಲಂಬೋದಿಂದ ಹೊರಟಿದ್ದ 207 ಮೀ. ಉದ್ದದ ಎಂವಿ ವಾನ್ ಹೈ 503 ಹೆಸರಿನ ಕಂಟೇನರ್ ಹಡಗು ಸೋಮವಾರ ಕೇರಳದ ಕರಾವಳಿ ತೀರ ಪ್ರವೇಶಿಸಿದೆ. ಜೂನ್ 25ಕ್ಕೆ ಹಡಗು ಮುಂಬೈ ತಲುಪಬೇಕಿತ್ತು. ಈ ನಡುವೆ ಬೆಂಕಿ ಕಾಣಿಸಿಕೊಂಡಿದೆ. ವಿಚಾರ ತಿಳಿಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಮತ್ತು ನೌಕಾ ಪಡೆ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಹಡಗಿನಲ್ಲಿದ್ದ 22 ಸಿಬ್ಬಂದಿ ಪೈಕಿ 18 ಮಂದಿ ರಕ್ಷಣೆ ಮಾಡಿದ್ದು, ಉಳಿದವರ ರಕ್ಷಣಾ ಕಾರ್ಯ ಮುಂದುವರೆದಿದೆ.