ಪಿಎಫ್‌ಐ ಸದಸ್ಯರಿಗೆ ಗಲ್ಲು ವಿಧಿಸಿದ್ದ ಜಡ್ಜ್‌ಗೆ ಬೆದರಿಕೆ: ನಾಲ್ವರ ಸೆರೆ

| Published : Feb 03 2024, 01:50 AM IST

ಪಿಎಫ್‌ಐ ಸದಸ್ಯರಿಗೆ ಗಲ್ಲು ವಿಧಿಸಿದ್ದ ಜಡ್ಜ್‌ಗೆ ಬೆದರಿಕೆ: ನಾಲ್ವರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ರಂಜಿತ್‌ ಶ್ರೀನಿವಾಸನ್‌ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಆಲಪ್ಪುಳ: ಕೇರಳ ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್‌ ಅವರನ್ನು ಕೊಲೆ ಮಾಡಿದ 15 ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶೆ ಶ್ರೀದೇವಿ ಅವರಿಗೆ ಬೆದರಿಕೆ ಹಾಕಿದ 4 ಜನರನ್ನು ಬಂಧಿಸಲಾಗಿದೆ.‘ಸೆಷನ್ಸ್‌ ಕೋರ್ಟ್‌ ಜಡ್ಜ್‌ ಶ್ರೀದೇವಿ ಅವರಿಗೆ ಜೀವ ಬೆದರಿಕೆ ಹಾಕಿದ ಸಂಬಂಧ ಇದುವರೆಗೂ 5 ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ನಾಲ್ವರನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರನ್ನು ನಸೀರ್‌ಮೊನ್‌, ರಫಿ, ನವಾಸ್‌ ನೈನಾ ಮತ್ತು ಶಹಜಹಾನ್‌ ಎಂದು ಗುರುತಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ರಂಜಿತ್‌ ಕೊಲೆ ಪ್ರಕರಣದಲ್ಲಿ ಕಳೆದ ಮಂಗಳವಾರ 15 ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.