ಸಾರಾಂಶ
ದೆಹಲಿ ಮೆಟ್ರೋಗೆ ಸೇರಿದ ಸ್ಥಳಗಳಲ್ಲಿ ಅರವಿಂದ್ ಕೇಜ್ರಿವಾಲ್ರನ್ನು ಬೆದರಿಸುವಂತಹ ಗೀಚು ಬರಹಗಳನ್ನು ಬರೆಯಲಾಗಿದೆ.
ನವದೆಹಲಿ: ದೆಹಲಿಯ ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡುವಂತಹ ಗೀಚು ಬರಹ ಬರೆಯಲಾಗಿದೆ.
ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎಎಪಿ ನಾಯಕಿ ಅತಿಶಿ, ‘ರಾಜೀವ್ ಚೌಕ್, ಪಟೇಲ್ ಚೌಕ್ ಮತ್ತು ಪಟೇಲ್ ನಗರ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಅನಾಮಿಕ ವ್ಯಕ್ತಿಯೊಬ್ಬ ಗೀಚುಬರಹ ಬರೆದು ಕೇಜ್ರಿವಾಲ್ಗೆ ಬೆದರಿಕೆ ಹಾಕಿದ್ದಾನೆ.
ಈ ದುಷ್ಕೃತ್ಯದಲ್ಲಿ ಬಿಜೆಪಿಯ ಕೈವಾಡವಿದ್ದು, ದೆಹಲಿ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಕಳೆದುಕೊಳ್ಳುವ ಹತಾಶೆಯಿಂದ ಈ ರೀತಿ ಷಡ್ಯಂತ್ರ ರೂಪಿಸಿದೆ’ ಎಂದು ಆರೋಪಿದ್ದಾರೆ.