ದಿಲ್ಲಿ ಮೆಟ್ರೋದಲ್ಲಿ ಕೇಜ್ರಿ ಬೆದರಿಸಿ ಗೀಚು ಬರಹ

| Published : May 21 2024, 01:45 AM IST / Updated: May 21 2024, 05:22 AM IST

kejriwal news 010.jpg
ದಿಲ್ಲಿ ಮೆಟ್ರೋದಲ್ಲಿ ಕೇಜ್ರಿ ಬೆದರಿಸಿ ಗೀಚು ಬರಹ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ಮೆಟ್ರೋಗೆ ಸೇರಿದ ಸ್ಥಳಗಳಲ್ಲಿ ಅರವಿಂದ್‌ ಕೇಜ್ರಿವಾಲ್‌ರನ್ನು ಬೆದರಿಸುವಂತಹ  ಗೀಚು ಬರಹಗಳನ್ನು ಬರೆಯಲಾಗಿದೆ.

ನವದೆಹಲಿ: ದೆಹಲಿಯ ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡುವಂತಹ ಗೀಚು ಬರಹ ಬರೆಯಲಾಗಿದೆ.

ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಎಎಪಿ ನಾಯಕಿ ಅತಿಶಿ, ‘ರಾಜೀವ್ ಚೌಕ್, ಪಟೇಲ್ ಚೌಕ್ ಮತ್ತು ಪಟೇಲ್ ನಗರ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಅನಾಮಿಕ ವ್ಯಕ್ತಿಯೊಬ್ಬ ಗೀಚುಬರಹ ಬರೆದು ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದಾನೆ.

ಈ ದುಷ್ಕೃತ್ಯದಲ್ಲಿ ಬಿಜೆಪಿಯ ಕೈವಾಡವಿದ್ದು, ದೆಹಲಿ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಕಳೆದುಕೊಳ್ಳುವ ಹತಾಶೆಯಿಂದ ಈ ರೀತಿ ಷಡ್ಯಂತ್ರ ರೂಪಿಸಿದೆ’ ಎಂದು ಆರೋಪಿದ್ದಾರೆ.