ಫಲಿತಾಂಶ ಬಿಜೆಪಿಗೆ ಸ್ಫೂರ್ತಿ, ಕಾಂಗ್ರೆಸ್‌ಗೆ ಆತಂಕ

| Published : Oct 09 2024, 01:42 AM IST

ಫಲಿತಾಂಶ ಬಿಜೆಪಿಗೆ ಸ್ಫೂರ್ತಿ, ಕಾಂಗ್ರೆಸ್‌ಗೆ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶವು ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ.

ನವದೆಹಲಿ: ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶವು ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬರುವ ಮಹಾರಾಷ್ಟ್ರ, ಜಾರ್ಖಂಡ್‌ ಹಾಗೂ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಈ ಗೆಲುವು ಅಲ್ಲಿನ ಬಿಜೆಪಿ ಘಟಕಗಳು ಹಾಗೂ ಮಿತ್ರಪಕ್ಷಗಳಲ್ಲಿ ಸ್ಫೂರ್ತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಎನ್‌ಸಿಪಿ (ಅಜಿತ್‌ ಪವಾರ್ ಬಣ) ನಾಯಕ ಪ್ರಫುಲ್‌ ಪಟೇಲ್‌ ಖುದ್ದು ಈ ಹೇಳಿಕೆ ನೀಡಿದ್ದಾರೆ.

ಆದರೆ ಕಾಂಗ್ರೆಸ್‌ನಲ್ಲಿ ಫಲಿತಾಂಶದಿಂದ ಆತಂಕ ಮನೆ ಮಾಡಿದೆ. ‘ಇಂಡಿಯಾ ಕೂಟದ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಂಗಿಯಾಗಿ ಮುನ್ನುಗ್ಗುವ ದುಸ್ಸಾಹಸವನ್ನು ಮುಂದಿನ ಚುನಾವಣೆಗಳಲ್ಲೂ ಮಾಡಿದರೆ ಅಪಾಯ ಗ್ಯಾರಂಟಿ’ ಎಂದು ಪಕ್ಷದ ಕೆಲವು ನಾಯಕರು ಮಾತಾಡಿಕೊಳ್ಳತೊಡಗಿದ್ದಾರೆ.