ಲಾಪತಾ ಲೇಡಿಸ್‌ ರೀತಿ ಧನಕರ್‌ ನಾಪತ್ತೆ ಏಕೆ : ಕೇಂದ್ರಕ್ಕೆ ಸಿಬಲ್‌ ಪ್ರಶ್ನೆ

| N/A | Published : Aug 10 2025, 01:30 AM IST / Updated: Aug 10 2025, 05:00 AM IST

jagdeep dhankar
ಲಾಪತಾ ಲೇಡಿಸ್‌ ರೀತಿ ಧನಕರ್‌ ನಾಪತ್ತೆ ಏಕೆ : ಕೇಂದ್ರಕ್ಕೆ ಸಿಬಲ್‌ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

 ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಲಾಪತಾ ಲೇಡಿಸ್‌ ಹಿಂದಿ ಚಿತ್ರದ ರೀತಿಯಲ್ಲೇ ಅವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರ ನೀಡಬೇಕು ಎಂದು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್‌ ಒತ್ತಾಯಿಸಿದ್ದಾರೆ.

ನವದೆಹಲಿ: ದಿಢೀರ್‌ ರಾಜೀನಾಮೆ ಬಳಿಕ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಲಾಪತಾ ಲೇಡಿಸ್‌ ಹಿಂದಿ ಚಿತ್ರದ ರೀತಿಯಲ್ಲೇ ಅವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉತ್ತರ ನೀಡಬೇಕು ಎಂದು ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್ ಸಿಬಲ್‌ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ ಜು.22ರಂದು ಜಗದೀಪ್ ಧನಕರ್ ರಾಜೀನಾಮೆ ನೀಡಿದರು. ಅಂದಿನಿಂದ ಇಂದಿನವರೆಗೆ ಅವರು ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರು ತಮ್ಮ ಅಧಿಕೃತ ನಿವಾಸದಲ್ಲಿಯೂ ಇಲ್ಲ. ನಾನು ಲಾಪತಾ ಲೇಡಿಸ್‌ ಬಗ್ಗೆ ಕೇಳಿದ್ದೇನೆ. ಆದರೆ ಲಾಪತಾ ವೈಸ್‌ ಪ್ರೆಸಿಡೆಂಟ್‌ ಬಗ್ಗೆ ಎಂದಿಗೂ ಕೇಳಿಲ್ಲ. ನಾವು ಇತರ ದೇಶಗಳಲ್ಲಿ ಈ ಬಗ್ಗೆ ಕೇಳುತ್ತಿದ್ದೆವು. ಆದರೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಂತಹ ವಿಷಯಗಳು ಸಾರ್ವಜನಿಕ ವಲಯದಲ್ಲಿ ಇರಬೇಕು’ ಎಂದಿದ್ದಾರೆ.

Read more Articles on