ಕ್ಷೇತ್ರ ಮರುವಿಂಗಡಣೆಬಗ್ಗೆ ಆತಂಕ ಬೇಡ: ಶಾ

| N/A | Published : Jun 06 2025, 12:29 AM IST / Updated: Jun 06 2025, 04:30 AM IST

ಸಾರಾಂಶ

ದಕ್ಷಿಣ ರಾಜ್ಯಗಳ ಕ್ಷೇತ್ರ ಮರುವಿಂಗಡಣೆ ವಿಂಗಡಣೆ ಸಮಸ್ಯೆಗಳನ್ನು ಸರಿಯಾದ ಸಮಯದಲ್ಲಿ ಪರಿಹರಿಸಲಾಗುವುದು ಮತ್ತು ಚರ್ಚಿಸಲಾಗುವುದು ಎಂದು ಹಲವಾರು ಸಂದರ್ಭಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ಶಾ ಪರ ಗೃಹ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.

 ನವದೆಹಲಿ : ದಕ್ಷಿಣ ರಾಜ್ಯಗಳ ಕ್ಷೇತ್ರ ಮರುವಿಂಗಡಣೆ ವಿಂಗಡಣೆ ಸಮಸ್ಯೆಗಳನ್ನು ಸರಿಯಾದ ಸಮಯದಲ್ಲಿ ಪರಿಹರಿಸಲಾಗುವುದು ಮತ್ತು ಚರ್ಚಿಸಲಾಗುವುದು ಎಂದು ಹಲವಾರು ಸಂದರ್ಭಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ಶಾ ಪರ ಗೃಹ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.

ಬುಧವಾರ ಜನಗಣತಿ ಘೋಷಣೆ ಆದ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗಣತಿ ಸಂಬಂಧಿತ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಶಾ ಪರ ಗೃಹ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.

‘2021ರಲ್ಲಿ ಕೋವಿಡ್ ಕಾರಣ ಗಣತಿ ಮುಂದೂಡಲಾಯಿತು. ಎಲ್ಲ ಕ್ಷೇತ್ರಗಳು ಬಾಧಿತವಾದವು. ಕೋವಿಡ್‌ ನಂತರ ಜನಗಣತಿ ನಡೆಸಿದ ದೇಶಗಳು ಜನಗಣತಿ ದತ್ತಾಂಶದ ಗುಣಮಟ್ಟ ಮತ್ತು ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದವು’ ಎಂದ ಅವರು ಭಾರತದ ಜನಗಣತಿ ವಿಳಂಬವನ್ನು ಸಮರ್ಥಿಸಿದ್ದಾರೆ.

‘ಜನಗಣತಿ ನಡೆಸಲು ಸುಮಾರು 30 ಲಕ್ಷ ಗಣತಿದಾರರು ಅಗತ್ಯವಿದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಗಣತಿದಾರರು ಈ ಪ್ರಕ್ರಿಯೆಯನ್ನು ನಡೆಸಲು ಪ್ರಮುಖ ವ್ಯಕ್ತಿಗಳಾಗಿದ್ದಾರೆ. ಕೋವಿಡ್‌ ನಂತರ ಶಿಕ್ಷಣ ಕ್ಷೇತ್ರ ಬಾಧಿತವಾಗಿತ್ತು. ಆಗ ಗಣತಿ ನಡೆಸಿದರೆ ಪ್ರಾಥಮಿಕ ಶಿಕ್ಷಣಕ್ಕೆ ಅಡ್ಡಿ ಆಗುತ್ತಿತ್ತು’ ಎಂದಿದ್ದಾರೆ.ಜನಗಣತಿಯ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ ಮತ್ತು ಅದು ಜನಗಣತಿಯ ಉಲ್ಲೇಖ ದಿನಾಂಕವಾದ ಮಾರ್ಚ್ 1, 2027 ರಂದು ಪೂರ್ಣಗೊಳ್ಳುತ್ತದೆ. ಇದಕ್ಕೆ ಬಜೆಟ್‌ ಕೊರತೆ ಇಲ್ಲ ಎಂದು ಹೇಳಿದ್ದಾರೆ.

Read more Articles on