ಸಾರಾಂಶ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಝಡ್-ಪ್ಲಸ್ ಭದ್ರತೆ ಒದಗಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಜೀವ ಬೆದರಿಕೆಗಳಿದ್ದ ಕಾರಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಝಡ್- ಪ್ಲಸ್ ಭದ್ರತೆ ಒದಗಿಸಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ.
ಖರ್ಗೆ ಅವರಿಗೆ ಬೆದರಿಕೆಗಳಿದ್ದ ಕಾರಣ ಅವರಿಗೆ ಝಡ್-ಪ್ಲಸ್ ಭದ್ರತೆಯನ್ನು ಒದಗಿಸುವ ಕುರಿತು ಸಚಿವಾಲಯವು ಫೆಬ್ರವರಿ ಆರಂಭದಲ್ಲಿ ನಿರ್ಧಾರ ತೆಗೆದುಕೊಂಡಿತ್ತು. ಈ ಪ್ರಕಾರ ಸಿಆರ್ಪಿಎಫ್ನ 30 ಕಮಾಂಡೋಗಳು 3 ಶಿಫ್ಟ್ ಆಧಾರದ ಮೇಲೆ 24 ಗಂಟೆಯೂ ಖರ್ಗೆಗೆ ಭದ್ರತೆ ನೀಡಲಿದ್ದಾರೆ. ಇದರೊಂದಿಗೆ ಪೈಲೆಟ್, ಬುಲೆಟ್ ಪ್ರೂಫ್ ಕಾರು, ಬೆಂಗಾವಲು ವಾಹನಗಳನ್ನು ನೀಡಲಾಗುತ್ತದೆ.ಝಡ್ - ಪ್ಲಸ್ ಭದ್ರತೆಯು ಅತಿ ಹೆಚ್ಚು ಬೆದರಿಕೆ ಇರುವ ವ್ಯಕ್ತಿಗೆ ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಭದ್ರತಾ ವ್ಯವಸ್ಥೆಯಾಗಿದೆ.