ಜಗನ್ ಮೋಹನ್ ರೆಡ್ಡಿ ಸೋಲಿಸಲು ಜನರು ಸಜ್ಜಾಗಿದ್ದಾರೆ ಚಂದ್ರಬಾಬು ನಾಯ್ಡು

| Published : Mar 30 2024, 12:48 AM IST

ಜಗನ್ ಮೋಹನ್ ರೆಡ್ಡಿ ಸೋಲಿಸಲು ಜನರು ಸಜ್ಜಾಗಿದ್ದಾರೆ ಚಂದ್ರಬಾಬು ನಾಯ್ಡು
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಮುಖ್ಯಸ್ಥ, ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಸೋಲಿಸಲು ಜನರು ಸಜ್ಜಾಗಿದ್ದಾರೆ ಎಂದು ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಹೇಳಿದರು.

ರಾಪ್ಟಡು: ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಮುಖ್ಯಸ್ಥ, ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಸೋಲಿಸಲು ಜನರು ಸಜ್ಜಾಗಿದ್ದಾರೆ ಎಂದು ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಹೇಳಿದರು. ರಾಪ್ಟಡು, ಅನಂತಪುರ ಜಿಲ್ಲೆಯ ಬುಕ್ಕರಾಯ ಸಮುದ್ರ ಮತ್ತು ಸಿಂಗನಮಲದಲ್ಲಿ ಪ್ರಜಾಗಳಂ ಚುನಾವಣಾ ಪ್ರಚಾರ ಪ್ರವಾಸದಲ್ಲಿ ಮಾತನಾಡಿದ ಅವರು, ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಮೇಮಂತ ಸಿದ್ದಂ ಚುನಾವಣಾ ಪ್ರಚಾರ ವಿಫಲವಾಗಿದೆ. ಮೇ 13 ಚುನಾವಣೆ ದಿನದ ನಂತರ ಅವರ ಅಹಂ ಕುಸಿಯುತ್ತದೆ. ರಾಜ್ಯದ ಪುನರ್‌ನಿರ್ಮಾಣಕ್ಕಾಗಿ ಟಿಡಿಪಿ, ಬಿಜೆಪಿ, ಜನಸೇನಾ ಎನ್‌ಡಿಎ ಮೈತ್ರಿಕೂಟ ಬೆಂಬಲಿಸಬೇಕು. ರೈತರಿಗೆ ಹನಿ ನೀರಾವರಿ ಸಹಾಯಧನ ಒದಗಿಸಿದರೆ ಜಿಲ್ಲೆಯು ದೇಶದಲ್ಲಿಯೇ ನಂಬರ್ ಒನ್ ಆಗುವ ಸಾಮರ್ಥ್ಯವಿದೆ ಎಂದು ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.