ಸಾರಾಂಶ
ವಾರಾಣಸಿಯಲ್ಲಿ ಪ್ರಧಾನಿ ಮೋದಿ ಲೋಕಸಭಾ ಅಭ್ಯರ್ಥಿ ಎಂದು ಮೂರನೇ ಬಾರಿಗೆ ಘೋಷಣೆ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.
ವಾರಾಣಸಿ: ಲೋಕಸಭೆ ಚುನಾವಣೆಗೆ ವಾರಾಣಸಿ ಅಭ್ಯರ್ಥಿಯಾಗಿ ಮೂರನೇ ಬಾರಿ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ವಾರಾಣಸಿಗೆ ಮೊದಲ ಬಾರಿ ಶನಿವಾರ ಸಂಜೆ ಕಾಶಿಗೆ ಭೇಟಿ ನೀಡಿ ಭರ್ಜರಿ ರೋಡ್ಶೋ ನಡೆಸಿದರು ಹಾಗೂ ವಿಶ್ವನಾಥನಿಗೆ ಅಭಿಷೇಕ ಮಾಡಿದರು.
ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕ್ಷೇತ್ರದಲ್ಲಿ ನಡೆಸಿದ ಬರೋಬ್ಬರಿ 28 ಕಿ.ಮೀ ರೋಡ್ಶೋನಲ್ಲಿ ಪ್ರಧಾನಿಗೆ ಜೊತೆಯಾದರು.
ಈ ನಡುವೆ ಕಾಶಿ ವಿಶ್ವನಾಥ ಮಂದಿರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಅಸಂಖ್ಯಾತ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಾರಿಯುದ್ದಕ್ಕೂ ಪ್ರಧಾನಿ ಮೋದಿಗೆ ಜೈಕಾರ ಕೂಗಿ ಪುಷ್ಪವೃಷ್ಟಿಗರೆದರು.