ತೀರ್ಪು ಪ್ರಜಾಪ್ರಭುತ್ವ ಪಾಲಿಗೆ ಉತ್ತಮ ಸೂಚನೆ: ಕಿರಣ್‌ ರಿಜಿಜು

| Published : Sep 16 2025, 12:03 AM IST

ತೀರ್ಪು ಪ್ರಜಾಪ್ರಭುತ್ವ ಪಾಲಿಗೆ ಉತ್ತಮ ಸೂಚನೆ: ಕಿರಣ್‌ ರಿಜಿಜು
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ತಿದ್ದುಪಡಿ ಕಾಯ್ದೆ ಕುರಿತ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶವನ್ನು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಸ್ವಾಗತಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಪಾಲಿಗೆ ಉತ್ತಮ ಸೂಚನೆಯಾಗಿದೆ ಎಂದು ಹೇಳಿದ್ದಾರೆ.

ಮುಂಬೈ: ವಕ್ಫ್‌ ತಿದ್ದುಪಡಿ ಕಾಯ್ದೆ ಕುರಿತ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶವನ್ನು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಸ್ವಾಗತಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಪಾಲಿಗೆ ಉತ್ತಮ ಸೂಚನೆಯಾಗಿದೆ ಎಂದು ಹೇಳಿದ್ದಾರೆ.

ವಕ್ಫ್‌ ಕಾಯ್ದೆಯನ್ನು ಸಂಸತ್ತಿನ ಇತಿಹಾಸದಲ್ಲೇ ಅತೀ ಸುದೀರ್ಘ ಚರ್ಚೆಯ ಬಳಿಕ ಅಂಗೀಕರಿಸಲಾಗಿದೆ ಎಂದ ಅವರು,

ಸುಪ್ರೀಂ ಕೋರ್ಟ್‌ ಈ ಕಾಯ್ದೆಯಲ್ಲಿನ ಅನೇಕ ಅಂಶಗಳನ್ನು ಎತ್ತಿಹಿಡಿದಿದೆ. ಕಾಯ್ದೆಯಲ್ಲಿರುವ ಅಂಶಗಳು ಬಡ ಮುಸ್ಲಿಂ ಸಹೋದರರು ಮತ್ತು ಸಹೋದರಿಯರು ಸೇರಿ ಎಲ್ಲ ಮುಸ್ಲಿಂ ಸಮುದಾಯದವರಿಗೆ ಅನುಕೂಲಕರವಾಗಿದೆ. ವಕ್ಫ್‌ ಆಸ್ತಿಯ ದುರ್ಬಳಕೆ, ವಕ್ಫ್‌ ಬೋರ್ಡ್‌ ಮೂಲಕದ ಅತಿಕ್ರಮಣಕ್ಕೆ ತಿದ್ದುಪಡಿ ಕಾಯ್ದೆಯಿಂದ ಕಡಿವಾಣ ಬೀಳಲಿದೆ. ಸುಪ್ರೀಂ ಕೋರ್ಟ್‌ಗೆ ಇಡೀ ವಿಚಾರದ ಅರಿವಿದೆ. ಸಂಸದೀಯ ಪ್ರಜಾಪ್ರಭುತ್ವದ ಪಾಲಿಗೆ ಸುಪ್ರೀಂ ಕೋರ್ಟ್‌ ದಾರಿದೀಪವಾಗಿದೆ ಎಂದು ಹೇಳಿದರು.