ಚುನಾವಣೆ ವೇಳೆಯೇ ಏಕೆ ಸಿಎಂ ಕೇಜ್ರಿವಾಲ್‌ ಬಂಧನ: ಇ.ಡಿ.ಗೆ ಸುಪ್ರೀಂ ಪ್ರಶ್ನೆ

| Published : May 01 2024, 02:01 AM IST

ಚುನಾವಣೆ ವೇಳೆಯೇ ಏಕೆ ಸಿಎಂ ಕೇಜ್ರಿವಾಲ್‌ ಬಂಧನ: ಇ.ಡಿ.ಗೆ ಸುಪ್ರೀಂ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ಎದುರಿನಲ್ಲೇ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಏಕೆ ಬಂದಿಸಿದ್ದೀರಿ ಎಂದು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದೆ

ನವದೆಹಲಿ: ಅಬಕಾರಿ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಲೋಕಸಭಾ ಚುನಾವಣೆ ವೇಳೆಯೇ ಏಕೆ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ.

ಜೀವನ ಮತ್ತು ಸ್ವಾತಂತ್ರ್ಯ ಎರಡೂ ಅತ್ಯಂತ ಮಹತ್ವದ್ದು. ನೀವು ಅದನ್ನು ಯಾರಿಗೂ ನಿರಾಕರಿಸಲು ಆಗದು.

ಹೀಗಾಗಿ ಚುನಾವಣೆಯೇ ವೇಳೆಯೇ ಬಂಧನ ಏಕೆ ಎಂಬುದರ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡಿ ಎಂದು ಸೂಚಿಸಿತು.

ಬಂಧನ ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಈ ಸೂಚನೆ ನೀಡಿದೆ.