ಕಾಂಬೋಡಿಯ-ಥಾಯ್‌ ಕದನ ವಿರಾ​ಮಕ್ಕೆ ಒಪ್ಪಿ​ಗೆ

| N/A | Published : Jul 26 2025, 12:00 AM IST / Updated: Jul 26 2025, 05:03 AM IST

ಸಾರಾಂಶ

ಗಡಿಯಲ್ಲಿರುವ ಹಿಂದೂ ಶಿವ ದೇವ​ಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸಮ​ರ​ಕ್ಕೆ 2ನೇ ದಿನ​ವಾದ ಶುಕ್ರ​ವಾರ ಬ್ರೇಕ್‌ ಬಿದ್ದಿದ್ದು, ಕದನ ವಿರಾ​ಮಕ್ಕೆ ಉಭಯ ದೇಶ​ಗಳು ಸಮ್ಮ​ತಿ​ಸಿವೆ.

 ಸುರಿನ್‌: ಗಡಿಯಲ್ಲಿರುವ ಹಿಂದೂ ಶಿವ ದೇವ​ಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸಮ​ರ​ಕ್ಕೆ 2ನೇ ದಿನ​ವಾದ ಶುಕ್ರ​ವಾರ ಬ್ರೇಕ್‌ ಬಿದ್ದಿದ್ದು, ಕದನ ವಿರಾ​ಮಕ್ಕೆ ಉಭಯ ದೇಶ​ಗಳು ಸಮ್ಮ​ತಿ​ಸಿವೆ.

ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾ​ಹಿಂ ಅವರು ಕಾಂಬೋ​ಡಿಯಾ ಪ್ರಧಾನಿ ಹುನ್‌ ಮಾನೆಟ್‌ ಹಾಗೂ ಥಾಯ್ಲೆಂಡ್‌ ಪ್ರಧಾನಿ ವೆಚಾ​ಯಾಯೈ ಜತೆ ಫೋನ್‌ ಮಾತು​ಕತೆ ನಡೆ​ಸಿ​ದರು. ಬಳಿಕ ಉಭಯ ದೇಶ​ಗಳು ಕದ​ನಕ್ಕೆ ಸಮ್ಮ​ತಿ​ಸಿ​ದರು. 

ಈ ವಿಷ​ಯ​ವನ್ನು ಖುದ್ದು ಇಬ್ರಾಹಿಂ ಬಹಿ​ರಂಗ​ಪ​ಡಿ​ಸಿ​ದ್ದಾರೆ. ಆದರೆ ನಮಗೆ ಸಮರ ನಿಲ್ಲಿ​ಸಲು ಸಮ್ಮತಿ ಇದೆ. ಕಾಂಬೋ​ಡಿಯಾ ಕೂಡ ಕದ​ನ​ವಿ​ರಾ​ಮಕ್ಕೆ ಬದ್ಧತೆ ವ್ಯಕ್ತ​ಪ​ಡಿ​ಸ​ಬೇಕು ಎಂದು ಥಾಯ್ಲೆಂಡ್‌ ಸ್ಪಷ್ಟ​ಪ​ಡಿ​ಸಿ​ದೆ.

ಸೇನಾ ಕಾನೂ​ನು: ಇದಕ್ಕೂ ಮುನ್ನ ಥಾಯ್ಲೆಂಡ್‌ನ ಈಶಾನ್ಯ ಗಡಿಯ 8 ಜಿಲ್ಲೆ​ಗಳಲ್ಲಿ ಸಮರ ಕಾನೂನು ಘೋಷಿಸಲಾಗಿತ್ತು. ಇದರರ್ಥ, ಥಾಯ್‌ ಸರ್ಕಾರವು ಸೇನೆಗೆ ಕಾಂಬೋಡಿಯಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರ ನೀಡಿತ್ತು.16 ಸಾವು: ಇದರ ನಡುವೆ, ಗಡಿಭಾಗದ ಎರಡೂ ದೇಶಗಳ 1.38 ಲಕ್ಷ ಜನ ಗುಳೆ ಹೋಗಿದ್ದಾರೆ. ಸಮರದಲ್ಲಿ ಎರಡೂ ದೇಶಗಳ ಒಟ್ಟಾರೆ ಮೃತರ ಸಂಖ್ಯೆ 16ಕ್ಕೇರಿದೆ. ಇದ​ರಲ್ಲಿ ಕಾಂಬೋ​ಡಿ​ಯಾದ ನಾಲ್ವರು ಥಾಯ್ಲೆಂಡ್‌ನ 14 ಜನರು ಇದ್ದಾರೆ.

Read more Articles on