ಆಕ್ರೋ​ಶದ ಕಾರಣ ಕೇರ​ಳ ರೈಲು ಚಾಲ​ಕ​ರಿ​ಗೆ ಸಾಫ್ಟ್ ಡ್ರಿಂಕ್ ಸೇವನೆ ನಿಷೇ​ಧ ಆದೇಶ ವಾಪ​ಸ್‌

| N/A | Published : Feb 22 2025, 12:48 AM IST / Updated: Feb 22 2025, 06:50 AM IST

ಆಕ್ರೋ​ಶದ ಕಾರಣ ಕೇರ​ಳ ರೈಲು ಚಾಲ​ಕ​ರಿ​ಗೆ ಸಾಫ್ಟ್ ಡ್ರಿಂಕ್ ಸೇವನೆ ನಿಷೇ​ಧ ಆದೇಶ ವಾಪ​ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರೈಲು ಚಾಲ​ಕ​ರಿ​ಗೆ ಸಾಫ್ಟ್ ಡ್ರಿಂಕ್ ನಿಷೇ​ಧ ಆದೇಶವನ್ನು ದಕ್ಷಿಣ ರೈಲ್ವೆಯ ತಿರು​ವ​ನಂತ​ಪುರ ವಿಭಾ​ಗ ವಾಪ​ಸ್‌ ಪಡೆ​ದಿದೆ.

ತಿರು​ವ​ನಂತ​ಪು​ರ: ರೈಲು ಚಾಲ​ಕ​ರಿ​ಗೆ ಸಾಫ್ಟ್ ಡ್ರಿಂಕ್ ನಿಷೇ​ಧ ಆದೇಶವನ್ನು ದಕ್ಷಿಣ ರೈಲ್ವೆಯ ತಿರು​ವ​ನಂತ​ಪುರ ವಿಭಾ​ಗ ವಾಪ​ಸ್‌ ಪಡೆ​ದಿದೆ. ದೋಷ​ಪೂ​ರಿತ ಬ್ರೀತ್‌ ಅನ​ಲೈ​ಸರ್‌ ಯಂತ್ರ​ಗಳು ಸಾಫ್ಟ್ ಡ್ರಿಂಕ್ ಕುಡಿ​ದರೂ ಮದ್ಯ ಕುಡಿ​ದಿ​ದ್ದಾರೆ ಎಂದು ತೋರಿ​ಸು​ತ್ತಿ​ದ್ದವು. ಹೀಗಾಗಿ ಚಾಲ​ಕ​ರಿಗೆ ಸಾಫ್ಟ್ ಡ್ರಿಂಕ್ ನಿಷೇ​ಧಿ​ಸ​ಲಾ​ಗಿತ್ತು. ಆದರೆ ಚಾಲ​ಕರ ಆಕ್ರೋ​ಶದ ಕಾರಣ ಆದೇಶ ಹಿಂಪ​ಡೆ​ಯ​ಲಾ​ಗಿ​ದೆ.

4ನೇ ಬಾರಿ ಕುಂಭದಲ್ಲಿ ಅಗ್ನಿ ಅವಘಡ: ಸಾವು ನೋವಿಲ್ಲ

ಪ್ರಯಾಗರಾಜ್‌: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ 4 ಬಾರಿ ಅಗ್ನಿ ಅವಘಡ ಸಂಭವಿಸಿದೆ. ಸುದೈವವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.ಶುಕ್ರವಾರ ಸಂಜೆ 4 ಗಂಟೆ ಹೊತ್ತಿಗೆ ಇಲ್ಲಿನ ಸೆಕ್ಟರ್‌ 25ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 2 ಟೆಂಟ್‌ಗಳು ಭಸ್ಮವಾಗಿವೆ. ಕೂಡಲೇ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಕಾರಣ ಇನ್ನು ತಿಳಿದುಬಂದಿಲ್ಲ.

ಜ.19ರಂದು ಸೆಕ್ಟರ್‌ 19ರಲ್ಲಿ ಸಿಲಿಂಡರ್‌ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಜ.25ರಂದು ಶಾರ್ಟ್‌ ಸರ್ಕಿಟ್‌ನಿಂದಾಗಿ 2 ಕಾರುಗಳು ಬೆಂಕಿಗಾಹುತಿಯಾಗಿದ್ದವು. ಫೆ.7ರಂದು ಇಸ್ಕಾನ್‌ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡು 12ಕ್ಕೂ ಹೆಚ್ಚು ಟೆಂಟ್‌ಗಳು ಭಸ್ಮವಾಗಿದ್ದವು.