27ಕೆಎಂಎನ್ ಡಿ13ಕೆ.ಆರ್ .ಪೇಟೆ ತಾಪಂ ಸಭಾಂಗಣದಲ್ಲಿ ಶಾಸಕ ಹೆಚ್.ಟಿ.ಮಂಜು ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. | Kannada Prabha
Image Credit: KP
2 ರೈಲ್ವೇ ವಲಯಗಳ ಅಧಿಕಾರಿಗಳ ನಡುವಿನ ಬಿಕ್ಕಟ್ಟಿನಿಂದಾಗಿ ಡೀಸೆಲ್ ತುಂಬಿಸಲು ರೈಲೊಂದರ ಎಂಜಿನನ್ನು ಸುಮಾರು 100 ಕಿ.ಮೀ. ದೂರ ವಾಪಸ್ ಕರೆಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.
2 ರೈಲ್ವೇ ವಲಯಗಳ ಅಧಿಕಾರಿಗಳ ನಡುವಿನ ಬಿಕ್ಕಟ್ಟಿನಿಂದಾಗಿ ಡೀಸೆಲ್ ತುಂಬಿಸಲು ರೈಲೊಂದರ ಎಂಜಿನನ್ನು ಸುಮಾರು 100 ಕಿ.ಮೀ. ದೂರ ವಾಪಸ್ ಕರೆಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ. ಮಥುರಾದಿಂದ ಜೈಪುರಕ್ಕೆ ಹೊರಟಿದ್ದ ರೈಲಿಗೆ ಅಲ್ವಾರ್ ಬಳಿ ಎಲೆಕ್ಟ್ರಿಕ್ ಎಂಜಿನ್ ತೆಗೆದು ಡೀಸೆಲ್ ಎಂಜಿನ್ ಜೋಡಿಸಲಾಯಿತು. ಆದರೆ ಈ ಎಂಜಿನ್ಗೆ ಡೀಸೆಲ್ ತುಂಬಿಸಲು ಜೈಪುರ ವಲಯದ ಅಲ್ವಾರ್ ಅಧಿಕಾರಿ ಒಪ್ಪಿಗೆ ನೀಡದ ಕಾರಣ, ಊತಾವರ್ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಎಂಜಿನನ್ನು 100 ಕಿ.ಮೀ. ದೂರದ ಮಥುರಾಗೆ ತಂದು ಡೀಸೆಲ್ ತುಂಬಿಸಿ ಪ್ರಯಾಣ ಮುಂದುವರೆಸಲಾಯಿತು. ಇದೆಲ್ಲಾ ನಡೆಯುವವರೆಗೆ ಸುಮಾರು 10 ಗಂಟೆಗಳ ಕಾಲ ಗೂಡ್ಸ್ ಬೋಗಿಗಳು ಊತಾವರ್ ನಿಲ್ದಾಣದಲ್ಲೇ ನಿಂತಿದ್ದವು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.