ನೀತಿ ಸಂಹಿತೆ ಹಿನ್ನೆಲೆ: ತಿರುಮಲ ದರ್ಶನಕ್ಕೆ ಶಿಫಾರಸು ಸ್ವೀಕಾರವಿಲ್ಲ

| Published : Mar 19 2024, 12:51 AM IST

ಸಾರಾಂಶ

ತಿರುಮಲದಲ್ಲಿ ದೇವರ ದರ್ಶನ ಹಾಗೂ ವಸತಿಗಾಗಿ ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ತೀರ್ಮಾನಿಸಿದೆ.

ಹೈದರಾಬಾದ್‌: ತಿರುಮಲದಲ್ಲಿ ದೇವರ ದರ್ಶನ ಹಾಗೂ ವಸತಿಗಾಗಿ ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ತೀರ್ಮಾನಿಸಿದೆ.ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ತಿರುಮಲ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳು ದೇವರ ದರ್ಶನ ಮತ್ತು ವಸತಿಗಾಗಿ ಯಾವುದೇ ರೀತಿಯ ಶಿಫಾರಸು ಪತ್ರಗಳನ್ನು ತಂದರೆ ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದೆ.ಚುನಾವಣೆ ಮುಗಿಯುವವರೆಗೂ ಈ ಆದೇಶ ಜಾರಿಯಲ್ಲಿ ಇರಲಿದ್ದು, ನಿಯಮಾನುಸಾರ ಬರುವ ಭಕ್ತಾದಿಗಳಿಗೆ ಮಾತ್ರ ದರ್ಶನ, ವಸತಿಯನ್ನು ಪರಿಗಣಿಸಲಾಗುತ್ತದೆ ಎಂದು ಟ್ರಸ್ಟ್‌ ತಿಳಿಸಿದೆ.