ಗ್ಯಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ 4 ವಾರ ಹೆಚ್ಚುವರಿ ಕಾಲಾವಕಾಶ
1 Min read
KannadaprabhaNewsNetwork
Published : Oct 06 2023, 01:14 AM IST| Updated : Oct 06 2023, 10:11 AM IST
Share this Article
FB
TW
Linkdin
Whatsapp
Image Credit: viral
ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ) ನಡೆಸುತ್ತಿರುವ ಸಮೀಕ್ಷೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ವಾರಣಾಸಿ: ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ 4 ವಾರ ಹೆಚ್ಚುವರಿ ಕಾಲಾವಕಾಶ ನೀಡಿ ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್ಐ) ನಡೆಸುತ್ತಿರುವ ಸಮೀಕ್ಷೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಹಾಗಾಗಿ ನ.6ರೊಳಗೆ ಸಮೀಕ್ಷೆ ನಡೆಸಿ ನ್ಯಾಯಾಲಯದ ಮುಂದೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ನ್ಯಾಯಾಧೀಶ ಎ.ಕೆ ವಿಶ್ವೇಶ್ ನೇತೃತ್ವದ ಪೀಠ ಆದೇಶ ಹೊರಡಿಸಿದ್ದಾರೆ. ಗ್ಯಾನವಾಪಿ ಮಸೀದಿಯಲ್ಲಿ ಲಿಂಗ ರೂಪಿ ಆಕೃತಿ ಪತ್ತೆಯಾಗಿದ್ದರಿಂದ ಹಾಗೂ ಮಸೀದಿಯಲ್ಲಿ ಅನೇಕ ಹಿಂದೂ ದೇವರ ವಿಗ್ರಹಗಳು ಇರುವ ಕಾರಣ ಅದು ಪ್ರಾಚೀನ ಕಾಲದಲ್ಲಿ ಮಂದಿರವಾಗಿತ್ತೇ ಎಂಬುದರ ಕುರಿತಾಗಿ ಸಮೀಕ್ಷೆ ನಡೆಯುತ್ತಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.