‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’: ಪತ್ರಿಕೋದ್ಯಮ ಮಾಹಿತಿ ಸಂಗ್ರಹ

| Published : Oct 18 2024, 12:11 AM IST

‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’: ಪತ್ರಿಕೋದ್ಯಮ ಮಾಹಿತಿ ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಮಕ್ಕಳ ಗ್ರಂಥಾಲಯ, ಕೊಡಗು ಮಕ್ಕಳ ಹಕ್ಕುಗಳ ಕ್ಲಬ್, ನಾವು ಪ್ರತಿಷ್ಠಾನದ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿರುವ ‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’ ಕಾರ್ಯಕ್ರಮದ ಶಿಬಿರಾರ್ಥಿಗಳು ಬುಧವಾರ ಪಟ್ಟಣದ ಪತ್ರಿಕಾಭವನಕ್ಕೆ ಭೇಟಿ ನೀಡಿ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕೊಡಗು ಮಕ್ಕಳ ಗ್ರಂಥಾಲಯ, ಕೊಡಗು ಮಕ್ಕಳ ಹಕ್ಕುಗಳ ಕ್ಲಬ್, ನಾವು ಪ್ರತಿಷ್ಠಾನದ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿರುವ ‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’ ಕಾರ್ಯಕ್ರಮದ ಶಿಬಿರಾರ್ಥಿಗಳು ಬುಧವಾರ ಪಟ್ಟಣದ ಪತ್ರಿಕಾಭವನಕ್ಕೆ ಭೇಟಿ ನೀಡಿ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಪಡೆದುಕೊಂಡರು.

ಜಿಲ್ಲಾ ಹಾಗೂ ರಾಜ್ಯಮಟ್ಟದ ಕನ್ನಡ, ಇಂಗ್ಲಿಷ್ ದಿನಪತ್ರಿಕೆಗಳ ಮುದ್ರಣ, ಪ್ರಸರಣ ಮತ್ತು ಓದುಗರ ಬಗ್ಗೆ ಮಾಹಿತಿ ಸಂಗ್ರಹಿಸಿದರು. ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ವಿವರ ಕೇಳಿ ತಿಳಿದುಕೊಂಡರು.

ಪತ್ರಕರ್ತರ ಕಾರ್ಯಚಟುವಟಿಕೆಗಳ ಬಗ್ಗೆ ಪತ್ರಕರ್ತರರಾದ ರವಿ, ಲೋಕೇಶ್, ವಿಜಯ್, ದುಷ್ಯಂತ್ ಅವರೊಂದಿಗೆ ಚರ್ಚಿಸಿದರು. ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ಸುಮನ್ ಮ್ಯಾಥ್ಯೂ ಇದ್ದರು.27ರಂದು ಮಹಿಳಾ ಸಹಕಾರ ಸಂಘ ವಜ್ರಮಹೋತ್ಸವ:

ಸೋಮವಾರಪೇಟೆ: ಇಲ್ಲಿನ ಮಹಿಳಾ ಸಹಕಾರ ಸಂಘಕ್ಕೆ ೭೫ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ 27ರಂದು ಬೆಳಗ್ಗೆ 10.30ಕ್ಕೆ ಸಮಾಜದ ಆವರಣದಲ್ಲಿ ವಜ್ರಮಹೋತ್ಸವ ನಡೆಸಲಾಗುವುದು. ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಸಹಕಾರ ಸಂಘಗಳ ಉಪ ನಿಬಂಧಕ ವಿಜಯಕುಮಾರ್, ಸಹಾಯಕ ನಿಬಂಧಕರಾದ ಶೈಲಜಾ ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ಲೀಲಾ ನಿರ್ವಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.