ಸಾರಾಂಶ
ಮಹಿಳೆಯರು ಸ್ವಾವಲಂಭಿಗಳಾಗಿ ದುಡಿಯುತ್ತಿದ್ದು ಹೊರಗಿನ ಸ್ಥಳಗಳಿಂದ ನಿತ್ಯ ಪ್ರಯಾಣಿಸುವವರಿಗೆ ವಸತಿ ನಿಲಯಗಳನ್ನು ನಿರ್ಮಿಸಿ ಕೊಡುವ ಮೂಲಕ ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟರೆ ಬಹಳಷ್ಟು ಅನುಕೂಲಕರವಾಗಲಿದೆ. ಶಿಕ್ಷಣ, ತರಬೇತಿ, ಕೆಲಸಗಳು ಮಾಡುವಂತ ಮಹಿಳೆಯರು ವಸತಿ ಸೌಲಭ್ಯಗಳಿಲ್ಲದೆ ನಿತ್ಯ ಪ್ರಯಾಣಿಸುವ ಹರಸಾಹಸ ಮಾಡುವ ಮೂಲಕ ಪರದಾಡುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಕೋಲಾರಮಲಬಾರ್ ಚಾರಿಟಬಲ್ ಟ್ರಸ್ಟ್ನಿಂದ ಸಿ.ಎಸ್.ಆರ್. ಅನುದಾನದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಹಸಿವು ಮುಕ್ತ ರಾಷ್ಟ್ರ ನಿರ್ಮಾಣದ ಸರ್ಕಾರದ ಯೋಜನೆಗೆ ಪೂರಕವಾಗಿ ಸಂಸ್ಥೆಯು ಬಡವರಿಗೆ ಆಹಾರ ಕಿಟ್ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅಭಿನಂದನಾರ್ಹ ಎಂದು ಸಂಸದ ಎಂ.ಮಲ್ಲೇಶ್ಬಾಬು ತಿಳಿಸಿದರು.ನಗರದ ಎಂ.ಬಿ.ರಸ್ತೆಯ ಶಾರದ ಟಾಕೀಸ್ ಹಿಂಭಾಗದ ರಸ್ತೆಯಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ನಿಂದ ಮೊಬೈಲ್ ವಾಹನದಲ್ಲಿ ಆಹಾರ ಕಿಟ್ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಹಿಳಾ ಹಾಸ್ಟೆಲ್ ನಿರ್ಮಿಸಿ
ಮಹಿಳೆಯರು ಸ್ವಾವಲಂಭಿಗಳಾಗಿ ದುಡಿಯುತ್ತಿದ್ದು ಹೊರಗಿನ ಸ್ಥಳಗಳಿಂದ ನಿತ್ಯ ಪ್ರಯಾಣಿಸುವವರಿಗೆ ವಸತಿ ನಿಲಯಗಳನ್ನು ನಿರ್ಮಿಸಿ ಕೊಡುವ ಮೂಲಕ ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟರೆ ಬಹಳಷ್ಟು ಅನುಕೂಲಕರವಾಗಲಿದೆ. ಗ್ರಾಮೀಣಾ ಪ್ರದೇಶಗಳಿಂದ ನಗರ ಪ್ರದೇಶಗಳಲ್ಲಿ ಶಿಕ್ಷಣ, ತರಬೇತಿ, ಕೆಲಸಗಳು ಮಾಡುವಂತ ಮಹಿಳೆಯರು ವಸತಿ ಸೌಲಭ್ಯಗಳಿಲ್ಲದೆ ನಿತ್ಯ ಪ್ರಯಾಣಿಸುವ ಹರಸಾಹಸ ಮಾಡುವ ಮೂಲಕ ಪರದಾಡುತ್ತಿದ್ದಾರೆ. ಅವರಿಗೆಲ್ಲಾ ವಸತಿ ಸೌಲಭ್ಯಗಳು ಕಲ್ಪಿಸಿಕೊಟ್ಟಲ್ಲಿ ಬಹಳಷ್ಟು ಅನಾಹುತಗಳು ತಪ್ಪಲಿದೆ ಎಂದರು.ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಗಳು, ಬೀದಿ ದೀಪದ ವ್ಯವಸ್ಥೆಗಳಿಲ್ಲದ ಕಡೆ ಸೋಲರ್ ವ್ಯವಸ್ಥೆ ಕಲ್ಪಿಸಿದಲ್ಲಿ ಅನುಕೂಲಕರವಗಲಿದೆ ಅದೇ ರೀತಿ ಅಂಗನವಾಡಿ ಶಾಲೆಗಳನ್ನು ಅಭಿವೃದ್ದಿಪಡಿಸುವ ಮೂಲಕ ಸಿ.ಎಸ್.ಆರ್. ಅನುದಾನ ಸಾರ್ಥಕಪಡಿಸುವಂತಾಗಬೇಕೆಂದು ಸಲಹೆ ನೀಡಿದರು.ಟ್ರಸ್ಟ್ ಸೇವೆಗೆ ಶ್ಲಾಘನೆ
ಜೆ.ಡಿ.ಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ, ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಜೊತೆಗೆ ಮಲಬಾರ್ ಚಾರಿಟಬಲ್ ಟ್ರಸ್ಟ್ ಕೈ ಜೋಡಿಸಿರುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಟ್ರಸ್ಟ್ ವ್ಯವಸ್ಥಾಪಕ ಆಸ್ಕರ್, ಪತ್ರಕರ್ತ ವಿ.ಮುನಿರಾಜು, ನಗರಸಭೆ ಸದಸ್ಯ ವಿ.ಮಂಜುನಾಥ್, ಮುಖಂಡ ಸಾ.ಮಾ.ಅನಿಲ್. ಹಾಲು ಒಕ್ಕೂಟದ ಮಾಜಿ ನಿರ್ದೇಶಕ ವಡಗೂರು ಹರೀಶ್ ಇದ್ದರು.